close
Choose your channels

‘ಸಿ ಬಿ ಐ ಸತ್ಯ’ ಕ್ಯಾನ್ ಇಂದ ಹೊರಗೆ!

Thursday, October 31, 2013 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಕನ್ನಡ ಚಿತ್ರ ರಂಗದಲ್ಲಿ 37 ವರ್ಷಗಳ ಹಿಂದಿನ ಸಾವಿರ ಮೆಟ್ಟಿಲು ಮತ್ತೆ ನವೀಕರಿಸಿ ಬಿಡುಗಡೆ ಮಾಡಿದ ಉದಾಹರಣೆಯ ಮುಂದು ಈ 15-20 ವರ್ಷಗಳ ಹಿಂದಿ ಸಿ ಬಿ ಐ ಸತ್ಯ ಸಿನೆಮಾ ಬಿಡುಗಡೆ ಮಾಡುವುದರಲ್ಲಿ ಏನು ಸ್ಪೆಷಲ್ ಅಲ್ಲವೇ!

ಅರ್ಚನ ಹಾಗೂ ಅಭಿಜಿತ್ ಅವರುಗಳ ಫೋಟೋ ನೋಡಿದರೆ ಈ ಸಿನೆಮಾ ಕನಿಷ್ಠ 15 ವರ್ಷಗಳ ಹಿಂದಿನ ಸಿನೆಮಾ ಎನ್ನಬಹುದು. ಸಿ ಬಿ ಐ ಸತ್ಯ ಈಗ ಮತ್ತಷ್ಟು ಮರು ಚಿತ್ರೀಕರಣದ ನಂತರ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

ಬೆಂಗಳೂರಿನ ಚಾಮರಾಜಪೇಟೆಯ ವಿಜಯ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಗಿದು ಈ ರವಿ ಪ್ರಸಾದ್ ಮೂವಿ ಮಕೇರ್ಸ್ ಸಿನೆಮಾದ ಆಗಿನ ಛಾಯಾಗ್ರಹಕ ಮುತ್ತು ಮತ್ತು ಈಗಿನ ಛಾಯಾಗ್ರಾಹಕ ವೀನಸ್ ಮೂರ್ತಿ. ನಿರ್ದೇಶಕ ವೈ ಕೃಷ್ಣಾಂರಾಜು ಅವರದೇ ಕಥೆ ಚಿತ್ರಕಥೆ ಈಗಿನ ಕಾಲಕ್ಕೆ ಕೆಲವು ಬದಲಾವಣೆ ಮಾಡಿ ಅವರು ಮರು ಚಿತ್ರೀಕರಣ ಸಹ ಮಾಡಿದ್ದಾರೆ. ಎಂ ಎಸ್ ನರಸಿಂಹ ಮೂರ್ತಿ ಅವರ ಸಂಭಾಷಣೆ ಇದೆ. ಥ್ರಿಲ್ಲರ್ ಮಂಜು ಅವರ ಸಾಹಸ ಒದಗಿಸಿದ್ದಾರೆ. ಸಂಪತ್ ಮದನ್ ಹರಿಣಿ ನೃತ್ಯ ನಿರ್ದೇಶನವಿದೆ.

ಶ್ರೀರಂಗ ಶ್ರೀಚಂದ್ರು ಸಾಹಿತ್ಯಕ್ಕೆ ಸಾಯಿ ಅವರ ಸಂಗೀತವಿದೆ. ಅಬಿಜಿತ್ ಅರ್ಚನ ಜೊತೆ ಗಾಯತ್ರಿ ತಾರಾ ದೊಡ್ಡಣ್ಣ ಎಂ ಎಸ್ ಉಮೇಶ್ ಶೋಬಾ ರಾಘವೇಂದ್ರ ಯೋಗರಮ್ ಟೆನ್ನಿಸ್ ಕೃಷ್ಣ ಹಾಗೂ ಇತರರು ಇದ್ದಾರೆ.

Follow us on Google News and stay updated with the latest!