close
Choose your channels

ಅಕ್ಟೋಬರ್ ನಲ್ಲಿ ಅಭಿಮನ್ಯು

Wednesday, September 17, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಅಕ್ಟೋಬರ್ ತಿಂಗಳಿನಲ್ಲಿ ಅನೇಕ ದೊಡ್ಡ ಸಿನೆಮಾಗಳ ಬಿಡುಗಡೆ ಪಟ್ಟಿಯೆ ಇದೆ. ದರ್ಶನ್ ಅವರ ಅಂಬರೀಷ,ಡಾಕ್ಟರ್ ಶಿವರಾಜಕುಮಾರ್ ಅವರ ಬೆಳ್ಳಿ ಅಲ್ಲದೆ ಅನೇಕ ಕನ್ನಡ ಸಿನೆಮಗಳು ಬಿಡುಗಡೆಯ ಭಾಗ್ಯಕ್ಕೆ ಕಾದು ಕುಳಿತಿದೆ.

ಶ್ರೀರಾಂ ಫಿಲ್ಮ್ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಅಭಿಮನ್ಯು ಚಿತ್ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಬೆಂಗಳೂರು ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಅರ್ಜುನ್ ಸರ್ಜಾ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣವಿರುವ ಅಭಿಮನ್ಯು ಚಿತ್ರವನ್ನು ಅರ್ಜುನ್ ಸರ್ಜಾ ಅವರೇ ನಿರ್ಮಿಸಿದ್ದಾರೆ.

ಕೆ.ಕೆ ಸಂಕಲನ,ಶಶಿಧರ್ ಅಡಪ ಕಲಾನಿರ್ದೇಶನ,ರಾಜುಸುಂದರಂ ನೃತ್ಯ ನಿರ್ದೇಶನ ಹಾಗೂ ಶಿವಾರ್ಜುನ್ ರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅರ್ಜುನ್ ಸರ್ಜಾ,ಸುರ್ವಿನ್ ಚಾವ್ಲಾ,ರವಿಕಾಳೆ,ಸಿಮ್ರಾನ್ ಕಪೂರ್,ರಾಹುಲ್ ದೇವ್,ಬಿರಾದಾರ್,ಜಹಂಗೀರ್,ವಿನಯಾಪ್ರಸಾದ್,ಸತೀಶ್ ಮುಂತಾದವರಿದ್ದಾರೆ.

Follow us on Google News and stay updated with the latest!