close
Choose your channels

ಎರಡ್ ಒಂದ್ ಲಾ ಮೂರು ಮಾತಿನ ಮನೆಗೆ

Tuesday, June 10, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಒಂದು ಕುತೂಹಲ ಶೀರ್ಷಿಕೆ ಇರುವ ‘ಎರಡ್ ಒಂದ್ ಲಾ ಮೂರು’ ಕನ್ನಡ ಸಿನೆಮಾ ಇದೀಗ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಕೆಲಸದಲ್ಲಿ ತೊಡಗಿಕೊಂಡಿದೆ.

ಸ್ನೇಹ ಪ್ರೀತಿ ಸಂಬಂದ ಕುರಿತಾದ ಚಿತ್ರದ ನಿರ್ಮಾಪಕರುಗಳಾದ ದೀಪಕ್ ಪಾಟೀಲ್ ಹಾಗೂ ನಳಿನಿ ನಾಗರಾಜ್ ಅವರು ಭೂ ಸ್ವರ ಸಿನೆಮಾ ಹೌಸ್ ‘ಎರಡ್ ಒಂದ್ ಲಾ ಮೂರು’ ಚಿತ್ರಕ್ಕೆ ಸೊರಬ, ಸಾಗರ, ಸಿರ್ಸಿ, ಬೆಂಗಳೂರು, ಹೆಸರಘಟ್ಟ ಸ್ಥಳಗಳಲ್ಲಿ ಚಿತ್ರೀಕರಣ ಮಾದಿದ್ದಾರೆ. ಚಂದನ್ ಟಿ ವಿ ದಾರವಾಹಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿ ಹಾಗೂ ಶ್ವೇತ ಪಂಡಿತ್ (ಬಿಗ್ ಬಾಸ್ ಸ್ಪರ್ಧಿ) ಜೊತೆ ಸಿದ್ಲಿಂಗು ಶ್ರೀಧರ್, ಗೋಪಿ ಆರಾಧ್ಯ, ಮಿತ್ರ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಮಾರ್ ದತ್ ಅವರು ಮೊದಲ ನಿರ್ದೇಶನ ಇದು. ಅವರು ಈ ಟಿವಿ ಸಂಸ್ಥೆಯಲ್ಲಿ ಹಾಗೂ ಕೆಲವು ಚಿತ್ರಗಳಿಗೆ ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ನಿರತರಾಗಿದ ಅನುಭವ ಹೊಂದಿದ್ದಾರೆ.

ಎ ಎಂ ನೀಲ್ ಅವರ ಸಂಗೀತದಲ್ಲಿ ಟಿಪ್ಪು, ಖೈಲಾಷ್ ಖೇರ್, ಸಂಗೀತ ಕಟ್ಟಿ, ರಾಜೇಶ್ ಕೃಷ್ಣ ಹಾಡುಗಳನ್ನು ಹೇಳಿದ್ದಾರೆ. ನವೀನ್ ಕುಮಾರ್ ಅವರು ಛಾಯಗ್ರಾಹಕರಾಗಿ ಪರಿಚಯ ಆಗುತ್ತಿದ್ದಾರೆ.

Follow us on Google News and stay updated with the latest!