close
Choose your channels

ಗಜಕೇಸರಿ ಮಾತು

Wednesday, February 26, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಗಜ ಕೇಸರಿ ಕನ್ನಡ ಸಿನೆಮಾ ಜನಪ್ರಿಯ ಯಷ್ ಹಾಗೂ ಅಮೂಲ್ಯ ಅಭಿನಯದ ಚಿತ್ರ ಮಾತುಗಳ ಜೋಡಣೆ ಸಮಯಕ್ಕೆ ಮಾಧ್ಯಮಕ್ಕೆ ಸುದ್ದಿ ತಲುಪಿದೆ. ಜಯಣ್ಣ ಅವರಿಗೆ ಸಿನೆಮಾ ಯಶಸ್ಸಿಗೆ ಮಾಧ್ಯಮದ ಮುಂದೆ ಆಗಾಗ್ಗೆ ಹೋಗಬೇಕಿಲ್ಲ ಎಂಬ ತಂತ್ರ ಸಿದ್ದಿಸಿದೆ.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಗಜಕೇಸರಿ ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

ಛಾಯಾಗ್ರಾಹಕರಾಗಿ ಖ್ಯಾತರಾಗಿರುವ ಎಸ್.ಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸತ್ಯಹೆಗ್ಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾನಿರ್ದೇನ, ಗಣೇಶ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ವಿಜಯಕುಮಾರ್, ಭರತ್ ಅವರ ನಿರ್ಮಾಣ ನಿರ್ವಹಣೆ ‘ಗಜಕೇಸರಿ ಚಿತ್ರಕ್ಕಿದೆ.

ಯಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶ್ರೀನಿವಾಸಪ್ರಭು, ರಂಗಾಯಣರಘು, ಅಶೋಕ್, ಶಿವರಾಂ, ಸಾಧುಕೋಕಿಲ, ಪ್ರಭಾಕರ್, ಜಾನ್ವಿಜಯ್, ಶಬಾಸ್ಖಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!