close
Choose your channels

ಜೈ ಭಜರಂಗ ಬಲಿ ಸಿದ್ದ

Friday, September 5, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

Jai Bhajarang Bali

ಭಜರಂಗಿ ಬಂದದ್ದು ಆಯಿತು,ಸಕ್ಸಸ್ ಆಗಿದ್ದು ಆಯಿತು. ಈಗ ಜೈ ಭಜರಂಗ ಬಲಿ ಸಿದ್ದಗೊಂಡಿದೆ. ಕೃಷ್ಣ ಅಜಯ್ ರಾವ್ ಅವರ ಜೊತೆಗೆ ಸಿಂಧು ಲೋಕನಾಥ್ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಅಜೈ ರಾವ್ ಅವರ ಇತ್ತೀಚಿನ ರೋಸ್ ಯಶಸ್ಸು ತಕ್ಕಮಟ್ಟಿಗೆ ಕಂಡಿದೆ.

ಹರಿಮೋನಿಯಂ ರೀಟ್ಸ್ ಲಾಂಛನದಲ್ಲಿ ಎಸ್.ಟಿ.ಪಾಲ್ ರಾಜ್ ಅವರು ನಿರ್ಮಿಸಿರುವ ಅಪಾರವೆಚ್ಚದ,ಅದ್ದೂರಿ ತಾರಾಬಳಗದ ಜೈ ಭಜರಂಗ ಬಲಿ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಸಂಗಮ ಚಿತ್ರದ ನಂತರ ರವಿವರ್ಮ ಅವರು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಅಜೇಯ್ ರಾವ್ ಅಭಿನಯಿಸಿದ್ದಾರೆ. ಸಿಂಧೂಲೋಕನಾಥ್,ಅನಂತನಾಗ್,ರವಿಶಂಕರ್,ಶೋಭ್ ರಾಜ್, ಆದಿಲೋಕೇಶ್,ಬುಲೆಟ್ ಪ್ರಕಾಶ್,ಮಿತ್ರ,ಅರುಣ್ ಸಾಗರ್,ಶ್ರುತಿನಾಯ್ಡು,ಟೆನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎ.ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಗಣೇಶ್ ಸಂಕಲನ,ಇಮ್ರಾನ್,ಕಲೈ ನೃತ್ಯ ನಿರ್ದೇಶನ ರವಿವರ್ಮ,ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಬರೆದರೆ ಸಂಭಾಷಣೆಯನ್ನು ವಿನಾಯಕರಾಮ ಕಲಗಾರು ಬರೆದಿದ್ದಾರೆ.

Follow us on Google News and stay updated with the latest!