close
Choose your channels

ದಸರಾ ಬೊಂಬೆ ಮಾತಿನ ಚಿತ್ರೀಕರಣ ಪೂರ್ಣ

Monday, September 15, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ದಸರಾ ಬೊಂಬೆ ಕನ್ನಡ ಸಿನೆಮಾ ಅತಿ ವೇಗವಾಗಿಯೇ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣಗೊಳಿಸಿ ಸಧ್ಯದಲ್ಲೇ ಆರು ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ.

ನಿರ್ಮಾಪಕರಾದ ಮಹೇಶ್ ಕುಮಾರ್ ಹಾಗೂ ರಘುರಾಜ್ ಅವರು ಮೈಸೂರಿನಲ್ಲೇ ಚಿತ್ರೀಕರಣ ಪ್ರಾರಂಬಿಸಿದರು. ಯಶ್ವಂತ್ ಸಂಭಾಷಣೆ ಜೊತೆಗೆ ನಿರ್ದೇಶನ ಸಹ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಬಹು ಮುಖ್ಯ ಘಟನೆಗಳ ಚಿತ್ರೀಕರಣ ಸಹ ಮಾಡಲಾಗಿದೆ.

ಪ್ರಚಾರಕರ್ತ ರಾಮಕೃಷ್ಣ ಅವರ ಪುತ್ರ ವೈಭವ್ ಅವರಿಗಿದು ಎರಡನೇ ಸಿನೆಮಾ. ಈ ಹಿಂದೆ ಅವರು ಸೀ ಯು ಸಿನೆಮಾದಲ್ಲಿ ನಾಯಕರಾಗಿ ಅಭಿನಯಿಸಿದ್ದರು.

ಹುಚ್ಚುಡುಗ್ರು ಸಿನೆಮದಿಂದ ಬೆಳಕಿಗೆ ಬಂದ ಅದಿತಿ ರಾವ್ ಈ ಚಿತ್ರದ ಕಥಾ ನಾಯಕಿ. ಜನಪ್ರಿಯ ನಿರ್ದೇಶಕ ಓಂ ಪ್ರಕಾಷ್ ರಾವ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾರಾಗಣದಲ್ಲಿ ರಾಜೇಂದ್ರ ಕಾರಂತ್,ಚಿಕ್ಕಣ್ಣ,ಬುಲ್ಲೆಟ್ ಪ್ರಕಾಶ್,ಕುರಿ ಬಾಂಡ್ ರಂಗ,ಸುರೇಶ್ ಚಂದ್ರ,ಲಕ್ಷ್ಮೀದೇವಮ್ಮ,ಉಮ ಹೆಬ್ಬಾರ್,ಗುರುರಾಜ ಹೊಸಕೋಟೆ ಹಾಗೂ ಇತರರು ಇದ್ದಾರೆ.

ವಿಕಾಸ್ ಅವರ ಸಂಗೀತ,ಸುರೇಶ್ ಬಾಬು ಅವರ ಛಾಯಾಗ್ರಹಣ ಈ ದಸರಾ ಬೊಂಬೆ ಸಿನೆಮಕ್ಕೆ ಒದಗಿಸಿದ್ದಾರೆ.

Follow us on Google News and stay updated with the latest!