close
Choose your channels

ಬೆಳ್ಳಿ ಜಗ್ಗಿ ದಿಲ್...ಈ ವಾರ

Monday, October 27, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೂರು ಸಿನಿಮಗಳು ಅಕ್ಟೋಬರ್ 31ಕ್ಕೆ ಬಿಡುಗಡೆಗೆ ನಿಂತಿವೆ. ಡಾಕ್ಟರ್ ಶಿವರಾಜಕುಮಾರ್ ಅವರು ಮೂರು ಶೆಡ್ ಅಲ್ಲಿ ಅಭಿನಯಿಸಿರುವ ಬೆಳ್ಳಿ ನಟರುಗಳಾದ ವಿನೋದ್ ಪ್ರಭಾಕರ್,ಪ್ರಶಾಂತ್,ದೀಪಕ್,ವೆಂಕಟೇಶ್ ಪ್ರಸಾದ್ ಹಾಗೂ ಕೃತಿ ಖರ್ಬಂದ ಅಭಿನಯದ ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರ ಬೆಳ್ಳಿ ಅಪಾರ ನಿರೀಕ್ಷೆ ಇರುವ ಚಿತ್ರ. ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ,ವಿ ಶ್ರೀಧರ್ ಸಂಭ್ರಮ್ ಅವರ ಸಂಗೀತ ಬೆಳ್ಳಿ ಚಿತ್ರಕ್ಕೆ ಒದಗಿಸಿದ್ದಾರೆ. ರಾಜೇಶ್ ಅವರು ಮೊದಲ ಬಾರಿಗೆ ಯಶಸ್ವಿನಿ ಬ್ಯಾನ್ನರ್ ಅಡಿಯಲ್ಲಿ ನಿರ್ಮಾಪಕ ಆಗಿದ್ದಾರೆ.

ಎರಡನೆಯ ಚಿತ್ರ ಜಗ್ಗಿ ನಟ ಸುನೀಲ್ ರಾಜ್ ಪ್ರಕಾರ ಎಲ್ಲ 68 ಸನ್ನಿವೇಶಗಳನ್ನು ಗಮನದಲ್ಲಿ ಇಟ್ಟು ಕೊಂಡು ಮಾಡಿರುವ ಚಿತ್ರ. ಆಹನ ಹಾಗೂ ಆರೋಹಿತ ನಾಯಕಿಯರು. ಇದು ನಿರ್ಮಾಪಕ ಎಸ್ ಎನ್ ಎಸ್ ಶ್ರೀ ನಿವಾಸ್ ಹಾಗೂ ನಿರ್ದೇಶಕ ವಿ ಎಂ ರಾಜು ಅವರ ಮೊದಲ ಸಿನಿಮಾ. ಎಲ್ವಿನ್ ಜೋಶ್ ಸಂಗೀತ,ರಮೇಶ್ ಅವರ ಛಾಯಾಗ್ರಹಣ ಇದೆ.

ಮೂರನೆಯ ಕನ್ನಡ ಸಿನಿಮಾ ಬರುವ ಶುಕ್ರವಾರಕ್ಕೆ ಈ ದಿಲ್ ಹೇಳಿದೆ ನೀ ಬೇಕಂತೆ.ಅವಿನಾಷ್ ನರಸಿಂಹರಾಜು ಹಾಗೂ ಶ್ರೀ ಶ್ರುತಿ ಅಭಿನಯದ ಚಿತ್ರ ಇದು ಪ್ರೇಮ ಕಥೆ ಒಳಗೊಂಡಿದೆ. ಪ್ರೀತಿ ಅನ್ನು ಹೇಳಿಕೊಳ್ಳುವ ರೀತಿ ಈಗ ಬದಲಾಗಿದೆ. ಅದಕ್ಕೆ ಹೃದಯಕ್ಕೆ ನೀನು ಬೇಕಂತೆ ಅಂತ ನಾಯಕ ಹೇಳುತ್ತಾನೆ. ಅವನ ಪ್ರೇಮಕ್ಕೆ ಪುರಸ್ಕಾರವೋ,ತಿರಸ್ಕಾರವೋ ಪರದೆಯ ಮೇಲೆ ನೋಡಬೇಕು. ಶ್ರೀಧರ ಹಾಗೂ ಪ್ರಭಾಕರ ಅವರ ನಿರ್ಮಾಣದ,ಸತೀಶ್ ಆರ್ಯನ್ ಸಂಗೀತದ,ಕೆ ಟಿ ಎಂ ಶ್ರೀ ನಿವಾಸ್ ನಿರ್ದೇಶನದ ಚಿತ್ರ ಯು ಅರ್ಹತಾ ಪತ್ರ ಪಡೆದಿದೆ.ಮುಂದಿನ ವಾರದ ಇನ್ನೆರಡು ಸಿನಿಮಗಳು ಬೆಳ್ಳಿ ಹಾಗೂ ಜಗ್ಗಿ ಯು/ಎ ಅರ್ಹತಾ ಪತ್ರವನ್ನು ಸ್ವೀಕರಿಸ&#

Follow us on Google News and stay updated with the latest!