close
Choose your channels

ಮತ್ತೊಮ್ಮೆ ಶರಣ್

Friday, June 13, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಮತ್ತೊಮ್ಮೆ', ಮಗದೊಮ್ಮೆ ನಗೆ ನಟ, ನಾಯಕಾಣಿ ಪರಿವರ್ತಿತ ಆಗಿರುವ ಶರಣ್ ಬರುತ್ತಲೇ ಇರಬೇಕು, ಪ್ರೇಕ್ಷಕರನ್ನು ರಂಜಿಸುತ್ತಲೇ ಇರಬೇಕು.

ಶರಣ್ ಎರಡು ರೀಮೇಕ್ – ಮಾಯಾ ಮೊಹಿನಿ ಮಲಯಾಳಂ ಸಿನೆಮಾ ‘ಜೈ ಲಲಿತ, ’ ಆಗಿ ಹಾಗೂ, ‘ಅಧ್ಯಕ್ಷ, ’ ತಮಿಳಿನ, ‘ವರುತಪದತ ವಾಲಿಬಾರ್ ಸಂಘಮ್,’ ಸಿನೆಮಾ ಅವತರಿಣಿಕೆ ನಂತರ ಸ್ವಂತ ಕಥೆಗೆ ತಮ್ಮ ಸಮಯ ನಿಗದಿ ಪಡಿಸಿದ್ದಾರೆ. ಜೂಲೈ ತಿಂಗಳಿನಲ್ಲಿ ಆರಂಭವಾಗುವ ಚಿತ್ರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಿದೆ ಎಂದು ವಾಸವಿ ಎಂಟರ್ ಪ್ರೈಸಸ್ ಲಾಂಛನದ ಉದಯ್.ಕೆ.ಮೆಹತ ಅವರು ತಿಳಿಸುತ್ತಾರೆ. ಪಿ.ಕುಮಾರ್(ವಿಷ್ಣುವರ್ಧನ, ಚಾರುಲತಾ ಹಾಗೂ ಜೈ ಲಲಿತ ನಿರ್ದೇಶಕರೆ ಈ ಸಿನೆಮವನ್ನು ನಿರ್ದೇಶಿಸುತ್ತಿದ್ದಾರೆ. ರಾವಣ, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್ ಹಾಗೂ ಲವ್ ಇನ್ ಮಂಡ್ಯ ಚಿತ್ರಗಳನ್ನು ಉದಯ್.ಕೆ.ಮೆಹತ ನಿರ್ಮಿಸಿದ್ದಾರೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಪನ್ನೀರ್ಸೆಲ್ವಂ ಛಾಯಾಗ್ರಹಣ ಹಾಗೂ ಮುರಳಿ, ಹರ್ಷ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಅನಿಲ್ ಸಂಭಾಷಣೆ ಬರೆಯುತ್ತಿದ್ದಾರೆ. ಶರಣ್, ರವಿಶಂಕರ್, ನೀನಾಸಂ ಅಶ್ವತ್, ತಬಲನಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!