close
Choose your channels

ಮಳೆಯಲ್ಲಿ ಮಳೆ

Thursday, October 9, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಕಾಯುತ್ತಾ ಇದ್ದ ಕ್ಷಣ ಬಂದೆ ಬಿಟ್ಟಿದೆ ಈ ಮಳೆ ಕನ್ನಡ ಸಿನೆಮಾ ತಂಡಕ್ಕೆ. ಮಳೆಯಲ್ಲೇ ಚಿತ್ರೀಕರಣ ಬಹಳಷ್ಟು ಬಾಗ ಆಗ ಬೇಕು ಅದಕ್ಕಾಗಿ ಕಾಯುತ್ತಾ ಇರುವ ಕ್ಷಣವನ್ನು ನಾಯಕಿ ಅಮೂಲ್ಯ,ನಾಯಕ ಪ್ರೇಮ್ ಸಹ ಹೇಳಿಕೊಂಡಿದ್ದರು. ಈಗ ಮಳೆಗಾಲ ಹಲವು ಕಡೆ. ಹಾಗಾಗಿ ಮೂರು ಹಾಡುಗಳ ಚಿತ್ರೀಕರಣವನ್ನು ನೈಜ ಮಳೆಯಲ್ಲಿ ಚಿತ್ರೀಕರಿಸುವುದು ಎಂದು ನಿರ್ದರಿಸಲಾಗಿದೆ.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್,ಚಂದ್ರು ಅವರು ನಿರ್ಮಿಸುತ್ತಿರುವ ಮಳೆ ಚಿತ್ರದ ಮೂರು ಹಾಡುಗಳ ಚಿತ್ರೀಕರಣ ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿ ನಡೆಯಲಿದೆ. ಪ್ರೇಮ್,ಅಮೂಲ್ಯ ಅಭಿನಯಿಸುವ ಈ ಹಾಡುಗಳಿಗೆ ಕಲೈ ಹಾಗೂ ಸ್ವರ್ಣ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಖ್ಯಾತ ನಿರ್ದೇಶಕ ಆರ್.ಚಂದ್ರು ಕಥೆ,ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ತೇಜಸ್ ನಿರ್ದೇಶಿಸುತ್ತಿದ್ದಾರೆ. ಚಂದ್ರು ಅವರ ಬಳಿ ಸಹಾಯಕರಾಗಿದ್ದ ಅನುಭವ ತೇಜಸ್ ಅವರಿಗಿದೆ. ಪ್ರೇಂ(ನೆನಪಿರಲಿ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಸುಜ್ಞಾನ್ ಛಾಯಾಗ್ರಹಣ,ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನ,ಕೆ.ಎಂ.ಪ್ರಕಾಶ್ ಸಂಕಲನ,ಥ್ರಿಲ್ಲರ್ ಮಂಜು,ರವಿವರ್ಮ ಸಾಹಸ ನಿರ್ದೇಶನ,ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕೆ.ಮುನೀಂದ್ರಪುರ.

Follow us on Google News and stay updated with the latest!