close
Choose your channels

ಮಿಂಚಾಗಿ ನೀ ಬರಲು ಪೂರ್ಣ

Thursday, July 31, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

Minchaagi Neenu Baralu

ಒಂದು ಮಿಂಚು ಇನ್ನೊಂದು ಕೋಲ್ಮಿಂಚು! ನಾಯಕ ದಿಗಂತ್ ಮಿಂಚಾಗಿ ನೀ ಬರಲು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹಾಡಿನ ಸಾಲನ್ನು (ಗಾಳಿಪಟ ಚಿತ್ರ) ಹಿಡಿದು ಕೋಲ್ಮಿಂಚಿನಂತ ನಾಯಕಿ ಕೃತಿ ಖರ್ಬಂದ ಜೊತೆ ತೆರೆಗೆ ಬರುವ ಸಿನೆಮಾ ಮಿಂಚಾಗಿ ನೀ ಬರಲು ಸಿದ್ದವಾಗಿದೆ.

ಇದು ಒಂದು ಸುಂದರ ಜೋಡಿ. ನಿಮ್ಮನ್ನು ರಂಜಿಸಲು ಅಷ್ಟೇ ಯಾಕೆ ಅಟ್ ಲೀಸ್ಟ್ ಮುದ್ದಾಗಿ ಓಡಾಡಿಕೊಂಡಿರಲು ನೀವು ನೋಡಿ ಆನಂದಿಸುವಂತಹ ದಿಗಂತ್ ಹಾಗಿ ಕೃತಿ ಇದ್ದಾರೆ.

ಸ್ಟ್ರಾಬೆರಿ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಮಹೇಶ್ ತಲಕಾಡ್, ರಣದೀಪ್.ಎಸ್ ಮಹಾದಿಕ್ ಹಾಗೂ ಮಹೇಶ್ ಕುಮಾರ್ ಜೈಸ್ವಲ್ ಅವರು ನಿರ್ಮಿಸುತ್ತಿರುವ ಮಿಂಚಾಗಿ ನೀ ಬರಲು ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ರಣದೀಪ್ ಮಹಾದಿಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ದಿಗಂತ್ ಅಭಿನಯಿಸಿದ್ದಾರೆ. ಕೃತಿ ಖರಬಂದ ಈ ಚಿತ್ರದ ನಾಯಕಿ. ರಮೇಶ್ ಭಟ್,ಸಿಹಿಕಹಿ ಚಂದ್ರು, ದಿಲೀಪ್ ರಾಜ್, ಅರ್ಚನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರೀಕರಣದ ಕೊನೆಯ ದಿನ ನಾಯಕಿ ಕೃತಿ ಖರಬಂದ ಅವರಿದ್ದ ರೂಂನಲ್ಲಿ ಆಕಸ್ಮಿಕ ಬೆಂಕಿ ಕಣಿಸಿಕೊಂಡಿತ್ತು. ದೇವರ ದಯೆಯಿಂದ ಕೃತಿ ಖರಬಂದ ಅವರು ಬೆಂಕಿ ಅಪಘಾತದಿಂದ ಪಾರಾಗಿದ್ದಾರೆ ಎಂದು ನಿರ್ಮಾಪಕ ಮಹೇಶ್ ತಲಕಾಡ್ ತಿಳಿಸಿದ್ದಾರೆ.

ಎ.ಪಿ.ಅರ್ಜುನ್, ಕವಿರಾಜ್, ಸಂತೋಷ್ ಅವರು ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸೂರ್ಯ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮಹೇಶ್ ತಲಕಾಡ್ ಛಾಯಾಗ್ರಹಣ, ಗಿರೀಶ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮುರಳಿ, ಪ್ರಭು ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ ಮಿಂಚಾಗಿ ನೀ ಬರಲು ಚಿತ್ರಕ್ಕಿದೆ.

Follow us on Google News and stay updated with the latest!