close
Choose your channels

ಮೇಲೋಡಿ ಯು

Tuesday, December 2, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಕಳೆದ ವಾರದಲ್ಲಿ ಮತ್ತೊಂದು ಕನ್ನಡ ಸಿನಿಮಾ ಸೆನ್ಸಾರ್ ಮಂಡಳಿ ಇಂದ ಯು ಅರ್ಹತಾ ಪತ್ರವನ್ನು ಪಡೆಯುವುದರ ಜೊತೆಗೆ ಮೆಚ್ಚುಗೆ ಸಹ ಹೆಗಲೇರಿಸಿಕೊಂಡಿರುವುದು ಮೇಲೊಡಿ ಕನ್ನಡ ಸಿನಿಮಾ.

ಬುದ್ದಿವಂತ ಸಂಭಾಷಣೆ ಬರಹಗಾರ ನಂಜುಂಡ ಅವರು 14 ವರ್ಷಗಳ ಬಳಿಕ ನಿರ್ದೇಶನಕ್ಕೆ ಹಿಂತಿರುಗಿರುವ ಮೇಲೋಡಿ ಮೂಲಕ ನಂಜುಂಡ ಕೃಷ್ಣ ಆಗಿ ಇಂದಿನ ಜಗತ್ತಿಗೆ ಆಧುನಿಕವಾದ ಕಥಾ ವಸ್ತು ಇಟ್ಟುಕೊಂಡು ಸಿನೆಮಾ ನಿರ್ದೇಶನ ಮಾಡಿದ್ದಾರೆ.

ಇಂದಿನ ಫೇಸ್ ಬುಕ್ ಯುಗದ ಆಭಾಸ, ಉಪಯೋಗ ಅನ್ನು ಸಮತೋಲನವಾಗಿ ಸೆರೆ ಹಿಡಿದು ಪ್ರೇಕ್ಷಕನ ಮುಂದೆ ಬರಲಿದೆ ಮೇಲೊಡಿ ಮುಖಾಂತರ. ಇಲ್ಲಿ ಸುಮಧುರ ಸಂಗೀತ ಸಹ ಅಳವಡಿಸಲಾಗಿದೆ.

ಶ್ರೀ ಅಂಬಾ ಭಗವತಿ ಫಿಲ್ಮ್ಸ್ ಅಡಿಯಲ್ಲಿ ಎಸ್ ಕೃಷ್ಣಮೂರ್ತಿ ಅವರು ನಿರ್ಮಾಣದ ಈ ಚಿತ್ರಕ್ಕೆ ಎಲ್ ಎನ್ ಶಾಸ್ತ್ರೀ ಅವರ ಮಾರ್ಗದರ್ಶನ ಜೊತೆ ಸಂಗೀತ ನಿರ್ದೇಶನ ಸಹ ಇದೆ.

ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಗಾಳಿಪಟ ನಂತರ ಈಗ ಈ ಸಿನೆಮಾದ ಮೂಲಕ ಮುಖ್ಯಾಪತ್ರದಲ್ಲಿ ಇದ್ದಾರೆ. ಜೊತೆಗೆ ಚೇತನ್ ಗಂಧರ್ವ,ಕಾರ್ತಿಕ ಮೆನನ್,ಅಕ್ಷತ ಮೂಲ್ರ,ರಾಮಕೃಷ್ಣ,ಮಂಡ್ಯ ರಮೇಶ್,ಸುಧಾಕರ್,ಶಾಮಂತ್,ಯಮುನ ಶ್ರೀನಿಧಿ,ಪ್ರಶಾಂತ್ ಸಂಭರ್ಗಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಆರ್ ವಿ ನಾಗೇಶ್ವರ ರಾವ್ ಛಾಯಾಗ್ರಹಣ,ವಿ ನಾಗೇಂದ್ರ ಪ್ರಸಾದ್ ಅವರ ಗೀತ ರಚನೆ,ಎಂ ಎಸ್ ಪಾಟೀಲ್ ಅವರ ಚಿತ್ರಕಥೆ,ತ್ರಿಭುವಣ್ ಅವರ ನೃತ್ಯ ಒದಗಿಸಿದ್ದಾರೆ.

Follow us on Google News and stay updated with the latest!