close
Choose your channels

ಸಂತೋಷಕ್ಕೆ ಸೆನ್ಸಾರ್ ಹಂತಕ್ಕೆ

Tuesday, August 12, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಸರವನದಾಸ್ ನಿರ್ಮಾಣದ ಹಾಗೂ ನಿರ್ದೇಶನದ ಸಂತೋಷಕ್ಕೆ ಕನ್ನಡ ಸಿನೆಮಾ ಈಗ ಸೆನ್ಸಾರ್ ಬಳಿ ಹೋಗಲು ಸಿದ್ದತೆ ಮಾಡಿಕೊಂಡಿದೆ. ಮೊದಲ ಸಿನೆಮಾಕ್ಕೆ ಸರವನದಾಸ್ ಅವರು ಕಥೆ, ಚಿತ್ರಕಥೆ ಸಹ ಬರೆದಿರುವರು.

ಒಬ್ಬ ನಾಯಕ ಹಾಗೂ ಆರು ನಾಯಕಿಯರ ಗಂಡೊಂದು ಹೆಣ್ಣಾರು ಈ ಸಿನೆಮಾದಲ್ಲಿ ಮೈಸೂರಿನ ಅಪ್ಪೊಲ್ಲೊ ಆಸ್ಪತ್ರೆಯ ಲ್ಯಾಬ್ ಉದ್ಯೋಗಿ ಜೀವ ನಾಯಕರು. ಸೌಜನ್ಯ, ವರ್ಷ, ಬಿಂದು, ಕಾವ್ಯ, ಸುಕನ್ಯ, ಪೂಜಾ ಈ ಚಿತ್ರದ ನಾಯಕಿಯರು. ವಿಜಯಗೋಪಾಲ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ವಿಶೇಷ ಕಥೆಯನ್ನು ಒಳಗೊಂಡ ಈ ಸಂತೋಷಕ್ಕೆ ಮಾನವೀಯತೆ ಮುಖ್ಯ ಎಂದು ಸಾರುತ್ತದೆ. ಈ ಮಾನವೀಯತೆ ವಿಚಾರವನ್ನು ಇಂದಿನ ಫೇಸ್ ಬುಕ್, ವ್ಹಾಟ್ಸ್ ಅಪ್ ಜನಾಂಗಕ್ಕೂ ಅನುಗುಣವಾಗುವ ಹಾಗೆ ನಿರ್ದೇಶಕರು ಚಿತ್ರೀಕರಿಸಿದ್ದಾರೆ.

ಸಂತೋಷಕ್ಕೆ ಸಿನೆಮಕ್ಕೆ 25 ದಿವಸಗಳ ಕಾಲ ಮೈಸೂರು, ಮೇಲುಕೋಟೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ರಂಗಸ್ವಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಿದ್ದಾರೆ.

ವಿನ್ ವೀರ ಅವರ ಸಾಹಸ, ಕಂಬಿ ರಾಜು ಅವರ ನೃತ್ಯ ನಿರ್ದೇಶನ, ಸೆಟ್ ಸೀನ ಅವರ ಕಲೆ, ವಿಜಯ್ ಅವರ ಸಂಕಲನ ಈ ಓಂ ಶರವಣಭವ ಪ್ರೊಡಕ್ಷನ್ ಚಿತ್ರ ಸಂತೋಷಕ್ಕೆ ಒಳಗೊಂಡಿದೆ.

Follow us on Google News and stay updated with the latest!