close
Choose your channels

ಹರ ಈ ವಾರ

Monday, May 12, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಧನಲಕ್ಷ್ಮಿ ನಾರಾಯಣ್ ಅವರ ಬ್ಯಾನರ್ ಅಲ್ಲಿ ಜಾನಕಿ ತುಲಸಿರಾಮ್ ಅವರ ನಿರ್ಮಾಣದ ‘ಹರ’... ರೆಡಿ ಟು ಸ್ಟ್ರೈಕ್ ಕನ್ನಡ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ತೆಲುಗಿನ ‘ಚಿನ್ನೋಡು’ ಚಿತ್ರದ ರೀಮೇಕ್ ಆದರೂ ಕನ್ನಡದ ಪರಿಸರಕ್ಕೆ ಹೊಂದುವ ಸಲುವಾಗಿ ಹೊಸದಾಗಿ ಚಿತ್ರಕಥೆ ಬರೆದು ನಿರ್ದೇಶನಕ್ಕೆ ಅಣುವು ಮಾಡಿ ದ್ದಾರೆ ದೇವರಾಜ್ ಪಾಲನ್.

ರಾಜ್ಯ ಪ್ರಶಸ್ತಿ ಛಾಯಾಗ್ರಹಕ ಕೆ ಎಂ ವಿಷ್ಣುವರ್ಧನ, ಸುಮಧುರ ಸಂಗೀತಕ್ಕೆ ಪ್ರಸಿದ್ದಿ ಆಗಿರುವ ಜಾಸ್ಸಿ ಗಿಫ್ಟ್ ಅವರ ರಾಗ ಸಂಯೋಜನೆ ಇರುವ ಈ ಕೌಟುಂಬಿಕ, ಸಾಹಸ ಪ್ರಧಾನ ಹೃದಯಸ್ಪರ್ಶಿ ಚಿತ್ರದಲ್ಲಿ ವಸಂತ್ ಹಾಗೂ ಪ್ರಜ್ಞಾ ಅವರು ಪ್ರಾಧಾನ ಭೂಮಿಕೆಯಲ್ಲಿ ಇದ್ದಾರೆ. ನಾಯಕನ ಜೊತೆಗಾರನಾಗಿ ಇಂದಿನ ಪ್ರಮುಖ ನಾಯಕ ಶರಣ್ ಇದ್ದಾರೆ.ರಾಹುಲ್ ದೇವ್, ವಿನಯಪ್ರಸಾದ್, ಸಾಧು ಕೋಕಿಲ, ಅವಿನಾಷ್, ಧರ್ಮ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಸುರೇಶ್ ಅರಸ್ ಅವರ ಸಂಕಲನ, ಜಯಂತ್ ಕಾಯ್ಕಿಣಿ, ಕವಿರಾಜ್, ಕೇಶವಾದಿತ್ಯ, ರಾಮ್ ಜೋಗಿಹಳ್ಳಿ ಅವರ ಗೀತ ಸಾಹಿತ್ಯ, ಪಳನಿರಾಜ್, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Follow us on Google News and stay updated with the latest!