close
Choose your channels

ಸದ್ಯದಲ್ಲೇ ತಿರುಪತಿ

Saturday, August 9, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಇದೇನಪ್ಪ ಸಧ್ಯದಲ್ಲೇ ತಿರುಪತಿಗೆ ಹೋಗೋದು ಅಂದ್ರ. ಅದು ನಿರ್ಮಾಪಕರನ್ನು ಕೇಳಬೇಕು. ಸಧ್ಯಕ್ಕೆ ತಿರುಪತಿ ಎಕ್ಸ್ ಪ್ರೆಸ್ ರಜತ ಪರದೆಗೆ ಸಿದ್ದವಾಗಿದೆ.

ದಿಲ್ ವಾಲ ಚಿತ್ರದ ನಾಯಕ ಸುಮಂತ್ ನಾಯಕರಾಗಿ ಅಭಿನಯಿಸಿರುವ ತಿರುಪತಿ ಎಕ್ಸ್ ಪ್ರೆಸ್ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರದ ಇದೇ ತಿಂಗಳಲ್ಲೇ ತೆರೆಗೆ ಬರಲಿದೆ.

ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸಿರುವ ಈ ಚಿತ್ರವನ್ನು ಪಿ.ಕುಮಾರ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ತಿರುಪತಿ ಎಕ್ಸ್ ಪ್ರೆಸ್ ಗೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ. ಗೌತಮ್ರಾಜ್ ಸಂಕಲನ,ಕಣ್ಣನ್ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮಂತ್, ಕೃತಿ ಖರಬಂದ,ಸಾಧುಕೋಕಿಲ, ಬುಲೆಟ್ ಪ್ರಕಾಶ್, ಅಶೋಕ್ ಮುಂತಾದವರಿದ್ದಾರೆ.

Follow us on Google News and stay updated with the latest!