close
Choose your channels

ತಿಪ್ಪಜ್ಜಿ ಮಾತಿನ ಚಿತ್ರೀಕರಣ ಪೂರ್ಣ

Wednesday, January 22, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ರೂಬಿ ಸಿನಿ ಕ್ರಾಪ್ಟ್ ಸಂಸ್ಥೆಯಲ್ಲಿ ಆರ್.ಜಿ.ಸಿದ್ದರಾಮಯ್ಯ ನಿರ್ಮಿಸುತ್ತಿರುವ ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕೆ ಮುಷ್ಕರನಿರತ ಕಾರ್ಮಿಕರ ಪರವಾಗಿ ಸಾಹುಕಾರನ ಬಳಿ ಮಾತನಾಡಿದ ತಿಪ್ಪಕ್ಕ (ತಿಪ್ಪಜ್ಜಿ) ನ್ಯಾಯ ಕೊಡಿಸುವಲ್ಲಿ ಸಫಲಳಾಗುತ್ತಾಳೆ. ಈ ದೃಶ್ಯವನ್ನು ಬಳ್ಳಾರಿಯ ಶ್ರೀ ಸಾಯಿ ಬಾಲಾಜಿ ಕಾಟನ್ ಮಿಲ್ನಲ್ಲಿ ಪೂಜಾ ಗಾಂಧಿ, ಡಾ ಸುರೇಶ್ ಶರ್ಮ, ಎಂ.ಎಸ್.ಉಮೇಶ್ ಅಭಿನಯದ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದಲ್ಲದೆ ಚಿತ್ರದುರ್ಗದ ತಿಪ್ಪಜ್ಜಿ ಸರ್ಕಲ್ ಹಾಗೂ ನೆಲಮಂಗಲದ ರವಿ ಫಾರಂ ಹೌಸ್ನಲ್ಲಿ ಸತತವಾಗಿ ಚಿತ್ರೀಕರಣ ನಡೆಸಿ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಆದಿತ್ಯ ಚಿಕ್ಕಣ್ಣ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಡಾ ಬಿ.ಎಲ್.ವೇಣು ಕಥೆ ಮತ್ತು ಸಂಭಾಷಣೆ, ಭರಣಿ ಶ್ರೀ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ಗೂಟೂರು, ಭರಣಿಶ್ರೀ, ಗೌಸ್ಫಿರ್, ಸಾಹಿತ್ಯ, ತ್ರಿಭುವನ್, ಮದನ್ ಹರಿಣಿ, ನೃತ್ಯ ನಿರ್ದೇಶನವಿದೆ. ಪೂಜಾಗಾಂಧಿ, ಡಾ ಸುರೇಶ್ ಶರ್ಮ, ದ್ರುವ ಶರ್ಮ, ನೇಹ ಪಾಟೀಲ್, ಭವ್ಯ, ಸತ್ಯಜಿತ್,ಶ್ರೀನಿವಾಸ ಮೂರ್ತಿ ಮಾನಸಿ, ಸುರೇಶ್ ರೈ, ಜಯರಾಮ್, ಬೇಬಿ ಅನುಷ, ಜ್ಯೋತಿ, ಗುರುಪ್ರಸಾದ್ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!