close
Choose your channels

ದೃಷ್ಯಮ್ ಮುಗೀತು ಟೈಟಿಲ್ ಎಲ್ಲಿ

Thursday, May 8, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಚಿತ್ರ ಮುಗಿದರು ಶೀರ್ಷಿಕೆ ಸಿಕ್ಕಿಲ್ಲ. ಚಿತ್ರಕ್ಕೆ ರೀಮೇಕ್ ಕಥಾ ವಸ್ತು ಏನೋ ಸಿಕ್ಕಿತು. ನಿರ್ದೇಶಕ ಪಿ ವಾಸು ಅವರು ಚಿತ್ರದ ಶೀರ್ಷಿಕೆ ಬೇಗ ಡಿಸೈಡ್ ಮಾಡುವುದರಲ್ಲಿ ಏಕೋ ಮೀನ ಮೇಷ ಏಣಿಸುತ್ತಿದ್ದಾರೆ. ಶಿವಾಜಿ ಪ್ರಭು ಅವರು ‘ಚಿನ್ನ ತಂಬಿ’ ಕನಕ್ಷನ್ ಇಲ್ಲಿ ವರ್ಕ್ ಔಟ್ ಆಗಿದೆ. ಪಿ ವಾಸು ಅದರ ನಿರ್ದೇಶಕರು. ಅದನ್ನೇ ವಿ ರವಿಚಂದ್ರನ್ ಅವರು ಕನ್ನಡಲ್ಲಿ ‘ರಾಮಾಚಾರಿ’ ಮಾಡಿದ್ದು. ಈಗ ಚಿನ್ನ ತಂಬಿ ಹಾಗೂ ರಾಮಾಚಾರಿ ಒಟ್ಟಿಗೆ ಈ ಮಲಯಾಳಂ ರೀಮೇಕ್ ಸಿನೆಮಾದಲ್ಲಿ. ಶಿವಾಜಿ ಪ್ರಭು ಈ ಹಿಂದೆ ‘ಬಾಸ್’ ಕನ್ನಡ ಸಿನೆಮಾದಲ್ಲಿ ಅಭಿನಯ ಮಾಡಿದ್ದರು.

ಈ೪ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಮುಖೇಶ್.ಆರ್.ಮೆಹತಾ ಅವರು ನಿರ್ಮಿಸುತ್ತಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ ಮಡಿಕೇರಿಯಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ.

ಇದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

ರವಿಚಂದ್ರನ್, ನವ್ಯಾನಾಯರ್, ಶಿವಾಜಿಪ್ರಭು, ಆಶಾಶರತ್, ಶ್ರೀನಿವಾಸಮೂರ್ತಿ, ಅಚ್ಯುತಕುಮಾರ್, ಸುಚೀಂದ್ರಪ್ರಸಾದ್, ಶಿವರಾಂ ಜೈಜಗದೀಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಖ್ಯಾತ ನಿರ್ದೇಶಕ ಪಿ.ವಾಸು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ‘ದೃಶ್ಯಂ’ ಚಿತ್ರದ ರಿಮೇಕ್. ಮಧುನೀಲಕಂಠನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದರೆ ವಿ.ನಾಗೇಂದ್ರಪ್ರಸಾದ್ ಗೀತರಚನೆ ಮಾಡಿದ್ದಾರೆ.

ರವಿಚಂದ್ರನ್, ನವ್ಯನಾಯರ್, ಶ್ರೀನಿವಾಸಮೂರ್ತಿ, ಜೈಜಗದೀಶ್, ಶಿವಾಜಿಪ್ರಭು ಅಚ್ಯುತರಾವ್, ಸುಚೀಂದ್ರಪ್ರಸಾದ್, ಆಶಾಶರತ್, ಸಾಧುಕೋಕಿಲ, ಸ್ವರೂಪಿಣಿ, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!