ಅಂಬರೀಶ ಮಾತು ಮರುಲೇಪನ

  • IndiaGlitz, [Tuesday,July 01 2014]

ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹೊರಟಿರುವ ಅಂಬರೀಷ ಸಿನೆಮಾ ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ. ಡಾಕ್ಟರ್ ಅಂಬರೀಶ್ ಅವರು ಅನಾರೋಗ್ಯದ ನಂತರ ಕೆಲವು ಭಾಗದ ಚಿತ್ರೀಕರಣ ಮಾಡಿದ್ದು ಆಗಿದೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೃಂದಾವನ ನಂತರ ಬಿಡುಗಡೆ ಆಗುತ್ತಿರುವ ಚಿತ್ರ ಚಿಂತನ್ ಅವರ ಒಂದು ಅನ್ವೇಷಣೆ ಸಹ ಈ ವ್ಯಾಪಾರಿ ಚಿತ್ರದಲ್ಲಿ ಅಳವಡಿಸಿ ಕೊಂಡಿದೆ.

ಸುಖಧರೆ ಪಿಕ್ಚರ ್ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಅಂಬರೀಶ ಚಿತ್ರಕ್ಕೆ ಈಗ ಬಾಲಾಜಿ ಸ್ಟುಡಿಯೋವಿನಲ್ಲಿ ಮಾತಿನ ಮರುಲೇಪನ ಸಾಗಿದೆ.ಚಿತ್ರವು ಬಹುತೇಕ ಸಂಪೂರ್ಣಗೊಂಡಿದ್ದು, ಎರಡು ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಒಂದುಗೀತೆಯನ್ನುಅಬ್ಬಾಯಿ ನಾಯಿಡು ಸ್ಟುಡಿಯೋವಿನಲ್ಲಿ ಹಾಕಿರುವ ಭವ್ಯ ಸೆಟ್ ನಲ್ಲಿ ಸದ್ಯದಲ್ಲಿಯೇ ಚಿತ್ರಿಸಿಕೊಳ್ಳಲಾಗುವುದು ಎಂದು ನಿರ್ದೇಶಕ ನಿರ್ಮಾಪಕ ಕೆ. ಮಹೇಶ್ ಸುಖಧರೆ ತಿಳಿಸಿದ್ದಾರೆ.

ಚಿತ್ರಕ್ಕೆಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಂಗೀತ ಹರಿಕೃಷ್ಣ, ಕಲೆ ಈಶ್ವರಿಕುಮಾರ್, ಸಾಹಸ ರವಿವರ್ಮ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಮುರುಳಿ,ಗಣೇಶ್, ಕಲೈ ನೃತ್ಯ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್ ಕುಮಾರ್,ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.

ಡಾ ಅಂಬರೀಶ್, ದರ್ಶನ ಜೊತೆಗೆ ಬಹುಭಾಷಾತಾರೆ ಪ್ರಿಯಾಮಣಿ, ಬುಲ್ ಬುಲ್ ಖ್ಯಾತಿಯ ರಚಿತಾರಾಮ್, ರೇಖಾ, ಬಾಲಿವುಡ್ ನ ಖ್ಯಾತ ಖಳ ನಾಯಕಕಲ್ಲಿದೋಜಿಣ,ತುಳಸಿ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ.ಲ.ನೆರೇಂದ್ರಬಾಬು ಮೊದಲಾದ ಭರ್ಜರಿ ತಾರಾಗಣ ಅಂಬರೀಷ ಚಿತ್ರವನ್ನು ಒಂದು ದೊಡ್ಡ ಸಿನೆಮವಾಗಿಸಿದೆ.