ಅಂಬರೀಷ ಮಾತಿನ ಲೇಪನ

  • IndiaGlitz, [Thursday,July 31 2014]

ಮುಂದಿನ ದಿನಗಳಲ್ಲಿ ರಾರಾಜಿಸಲಿರುವ ಬಹು ದೊಡ್ಡ ತಾರಾಗಣ, ದೊಡ್ಡ ವೆಚ್ಚದ ಸಿನೆಮಾ ಅಂಬರೀಷ ಚಿತ್ರಕ್ಕೆ ಮಾತಿನ ಮರುಲೇಪನ ಮುಗಿಸಿ ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ

ಸುಖಧರೆ ಪಿಕ್ಚರ್ಸ್ ಅಡಿಯಲ್ಲಿ ಮಹೇಶ್ ಸುಖಧರೆ ನಿರ್ಮಾಣದ ಅಂಬರೀಷ ಕರಿ ಸುಬ್ಬುವಿನ ಬಾಲಾಜಿ ಸ್ಟುಡಿಯೋ ಅಲ್ಲಿ ಮಾತಿನ ಮರುಲೇಪನ ಕೆಲಸ ನಡೆಯುತ್ತಿದೆ.

ಅಂಬರೀಷ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಚಿಂತನ್ ಅವರು ಒದಗಿಸಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ರವಿ ವರ್ಮ ಅವರ ಸಾಹಸ, ಮುರಳಿ, ಗಣೇಶ್ ಕಲೈ ನೃತ್ಯ ನಿರ್ದೇಶನ ಇದೆ.

ಡಾಕ್ಟರ್ ಅಂಬರೀಶ್, ದರ್ಶನ್, ಪ್ರಿಯಾಮಣಿ,ರಚಿತ ರಾಮ್,ರೇಖ ಕೆಲ್ಲಿ ದೊರ್ಜಿ, ತುಲಸಿ ಶಿವಮಣಿ, ಶರತ್ ಲೋಹಿತಾಶ್ವ, ರವಿ ಕಾಲೆ,ಬುಲ್ಲೆಟ್ ಪ್ರಕಾಷ್, ಸಾಧು ಕೋಕಿಲ, ತಿಮ್ಮೆ ಗೌಡ, ನೆಲ ನರೇಂದ್ರ ಬಾಬು ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.