ಈ ವಾರ ಬ್ರಹ್ಮೋತ್ಸವ!

  • IndiaGlitz, [Wednesday,February 05 2014]

‘ಬ್ರಹ್ಮ’ ಎಲ್ಲರ ವಿದಿ ಬರೆಯುವರು, ಈ ವಾರ ಅದೇ ಹೆಸರಿನಲ್ಲಿ ಬಾಕ್ಸ್ ಆಫೀಸು ವಿದಿ ಬರೆಯಲು ಬರುತ್ತಿದೆ. ಒಂದಂತು ನಿಜ. ಉಪೇಂದ್ರ ಸಿನೆಮಾ ಅಂದಮೇಲೆ ದೊಡ್ಡ ಔತಣವೆ ಕಾದಿದೆ. ಅವರ ಜೊತೆಗೆ ಆರ್ ಚಂದ್ರು ಅವರು ಹಾಗೂ ಗುರುಕಿರಣ್ ಸೇರಿದ್ದಾರೆ ಅಂದಮೇಲೆ ಹಬ್ಬದ ಊಟಕ್ಕೆ ಸಿದ್ದವಾಗಿರಿ. ಈಗಾಗಲೇ ಪ್ಲಾಟಿನಂ ಡಿಸ್ಕ್ ಹಾಡುಗಳ ವಿಚಾರದಲ್ಲಿ ನೀಡಲಾಗಿದೆ. ಪ್ರೇಕ್ಷಕ ಮಹಾಪ್ರಭುಗಳು ಆರ್ ಚಂದ್ರು ಅವರ ತಾಜ್ ಮಹಲ್, ಮೈಲಾರಿ, ಚರ್ಮಿನಾರ್ ಸಿನೆಮಗಳನ್ನು 100 ದಿವಸ ಓದುವ ಹಾಗೆ ಆಶೀರ್ವದಿಸಿದ್ದಾರೆ. ಅವರ ಪ್ರೇಮ್ ಕಹಾನಿ ಹಾಗೂ ಕೋ ಕೋ ಕೋಳಿ ಕೋತಿ ಬಾಕ್ಸ್ ಆಫೀಸು ಅಲ್ಲಿ ಪಾರ್ವಗಿಲ್ಲ ಎನಿಸಿಕೊಂಡಿತು.

ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು(ಅಮೃತಹಳ್ಳಿ) ನಿರ್ಮಿಸಿರುವ ‘ಬ್ರಹ್ಮ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಉಪೇಂದ್ರ ಅಭಿನಯಿಸಿದ್ದಾರೆ. ಪ್ರಣೀತಾ, ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್, ಶರಣ್, ಪದ್ಮಜಾರಾವ್, ಸುಚೇಂದ್ರಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್,ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ ‘ಬ್ರಹ್ಮ ಚಿತ್ರಕ್ಕಿದೆ.