ಕ ಈ ವಾರ

  • IndiaGlitz, [Tuesday,December 02 2014]

ಕ ಅಕ್ಷರಕ್ಕೆ ಕನ್ನಡ ಅಂತ ನಾವು ನೀವು ಅಂದು ಕೊಂಡಿದ್ದೇವೆ. ಆದರ ಮೊದಲ ಪ್ರಯತ್ನದಲ್ಲಿ ಕ ಅಕ್ಷರ ಶೀರ್ಷಿಕೆ ಇಂದ ಎಂದು ಅಡಗಿಸಿ ಹೇಳಲು ಹೊರಟಿದ್ದಾರೆ ಸಾಯಿ ಕೃಷ್ಣ ಎಂಬುದು ಸಧ್ಯದ ಸಸ್ಪೆನ್ಸ್.

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಷ್ ಅವರ ಪುತ್ರ ಸಾಯಿ ಕೃಷ್ಣ ಅವರ ಬಹು ನಿರೀಕ್ಷಿತ ಕನ್ನಡ ಚಿತ್ರ ಕ ಈ ವಾರ ಬಿಡುಗಡೆ ಆಗುತ್ತಿದೆ. ಕುತೂಹಲದ ಜೊತೆಗೆ ಈಗಿನ ಯುವಜನರ ನಾಡಿ ಮಿಡಿತವನ್ನು ಅರಿತಿರುವ ಸಾಯಿ ಕೃಷ್ಣ ಒಂದು ವಿಶೇಷ ಸಿನಿಮಾವನ್ನೇ ಮಾಡಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.

ಸಾಯಿ ಫಿಲ್ಮ್ಸ್;ಕ ಚಿತ್ರದ ಹಾಡುಗಳಿಂದ ಈಗಾಗಲೇ ಗೆದ್ದಿದ್ದು ಆಗಿದೆ. ಯು/ಎ ಅರ್ಹತಾ ಪತ್ರ ಸ್ವೀಕರಿಸಿರುವ ಕ...ಪ್ಯಾರ್ ರಿಸ್ಕ್ ಔರ್ ಮೋಹಬತ್...ಎಂಬ ಉಪಶೀರ್ಷಿಕೆ ಇಟ್ಟುಕೊಂಡಿದೆ.

ಸಾಯಿ ಕೃಷ್ಣ ಅವರು ಕ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ.

ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ ಕ ಚಿತ್ರದ ನಿರ್ಮಾಪಕರು ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್.

ಶರತ್,ಮೋನಿಶ್ ನಾಗರಾಜ್,ವಿಶಾಲ್ ನಾಯರ್,ಶೈನ್ ಶೆಟ್ಟಿ ಜೊತೆಗ ಪವಿತ್ರ,ಅನುಷ,ಪಲ್ಲವಿ,ದೀಪ,ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ. ಛಾಯಾಗ್ರಹಣ ಸ್ಟೀವ್ ಬೆಂಜಮಿನ್,ಸಂಗೀತ ಗಣೇಶ್ ನಾರಾಯಣ ಅವರದು.