ಕಲಾವಿದರೆಲ್ಲ ಒಂದೇ ಅಂತೂ ಇಂತೂ

  • IndiaGlitz, [Tuesday,December 31 2013]

ಯಾಕೇ ಈಗ ಈ ಮಾತು ಅಂತೀರಾ. ಮುಸುಕಿನಲ್ಲಿ ಗುದ್ದಾಟ ಕೇಳಿದ್ದೇವೆ ನೋಡಿದ್ದೇವೆ. ಅದೆಲ್ಲ ಕೇಳಿದಾಗ ಯಾಕಪ್ಪಾ ಈ ಚಿಕ್ಕ ಉಧ್ಯಮದಲ್ಲಿ ಈ ತರಹ ಬಿರುಕು ಎಂಬುದು ಆಗಾಗ್ಗೆ ಅನ್ನಿಸುತ್ತಾ ಇತ್ತು.

ಈ ಬಿರುಕಿಗೆ 2013 ವರ್ಷದ ಕೊನೆಯಲ್ಲಿ ಒಂದು ಸುಖಾಂತ್ಯ ಸಿಕ್ಕಿದೆ. ಮೆಮರೀ ಅನ್ನು ಸ್ವಲ್ಪ ಡಾಕ್ಟರ್ ರಾಜ್ ಕಪ್ ಹುಬ್ಬಳ್ಳಿ ಅಲ್ಲಿ ನಡೆದದನ್ನು ಜ್ಞಾಪಿಸಿಕೊಳ್ಳಿ. ಅಲ್ಲಿ ಶಿವಣ್ಣ ಅಭಿಮಾನಿಗಳು (ಶಿವಣ್ಣ ಆ ಸ್ಥಳದಲ್ಲಿ ಇರಲಿಲ್ಲ) ಹಾಗೂ ಕಿಚ್ಚ ಸುದೀಪ್ ಅವರ ನಡುವೆ ದೊಡ್ಡ ಮಾತುಕತೆಯೇ ಆಗಿತ್ತು. ರಾಘಣ್ಣ ಅಂದು ಮಧ್ಯ ವಹಿಸಿ ಪರಿಸ್ಥಿಯನ್ನು ಹತೋಟಿಗೆ ತಂದರು.

ಅಲ್ಲಿಂದ ಏನೋ ಗುಸು ಗುಸು ಹಾಗೂ ಮನಸ್ಸುಗಳು ದೂರ ಉಳಿದವು. ಚಿತ್ರರಂಗದಲ್ಲಿ ಕಲಾವಿದರೆಲ್ಲ ಒಂದಾಗುವ ಕ್ಷಣ ಬರುವುದೇ ಇಲ್ಲವೇನೋ ಅಂತಹ ಸಂದಿಗ್ದ ಪರಿಸ್ಥಿತಿ ಇತ್ತು ಬಿಡಿ.

ಅದಕೆಲ್ಲ ಪರಿಹಾರದ ಮೊದಲ ಮೆಟ್ಟಿಲಿನಂತೆ ಮೊದಲು ಕಂಡಂದ್ದು ವಿಜಯ ರಾಘವೇಂದ್ರ ಅವರು ಕಿಚ್ಚ ಸುದೀಪ್ ನಡೆಸಿಕೊಟ್ಟ ‘ಬಿಗ್ ಬಾಸ್’ಗೆದಿದ್ದು. ಎರಡನೆಯ ಕುರುಹು ಚಿತ್ರರಂಗದ ಕಲಾವಿದರಲ್ಲಿ ಬಿರುಕು ಇಲ್ಲ ಎಂಬುದಕ್ಕೆ ‘ಉಗ್ರ0’ ಸಾಕ್ಷಿಯಾಯಿತು.

ಶಿವಣ್ಣ ಅವರ ಸೋದರ ಮಾವ ಎಸ್ ಎ ಚಿನ್ನೇ ಗೌಡರ ಮಗ ಶ್ರೀಮುರಲಿ ಅವರ ಚಿತ್ರದ ವಿತರಣೆ ತೂಗುದೀಪ ಪ್ರೊಡಕ್ಷನ್ ಅಂದರೆ ದರ್ಶನ್ ಹಾಗೂ ದಿನಕರ ಅವರ ಸಂಸ್ಥೆ ಮಾಡುತ್ತಿದೆ. ಅದೇ ಅಲ್ಲದೆ ಆ ಸಿನೆಮಕ್ಕೆ ಕಿಚ್ಚ ಸುದೀಪ್ ಅವರು ಬೆಸ್ಟ್ ವಿಷಸ್ ಸಹ ಹೇಳಿರುವುದು ಸ್ವಾಗತರ್ಹ ಬದಲಾವಣೆ. ಶಿವಣ್ಣ ಹಾಗೂ ದರ್ಶನ್ ಅವರ ಬಾಂಧವ್ಯ ಸರಿ ಇಲ್ಲ ಅಂತಲೂ ಮಾತುಗಳು ಕೇಳಿಬರುತ್ತಾ ಇತ್ತು.

ಉಧ್ಯಮದ ಕಲಾವಿದರ ಆಗು ಹೋಗುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಇಂತಹ ವಿಚಾರಗಳು ಗಮನಕ್ಕೆ ಬರುತ್ತೆ ಹಾಗೆ ಅದಕ್ಕೆ ಪರಿಹಾರ ಎಂದು ಸಹ ಹಿಂಬಾಲಿಸುತ್ತೆ. ಪರಿಹಾರ ಸಿಕ್ಕಾಗ ಈ ರೀತಿಯ ಉಲ್ಲೇಖ ಆಗುವುದರಲ್ಲಿ ತಪ್ಪೇನಿಲ್ಲ.

ಆದರೂ ಎರಡು ತಂಡ ಎಂದು ಏನು ನಿರ್ಮಾಣ ಆಗಿತ್ತು ಅಂತ