ಕಾಲಭೈರವನಿಗೆ ಕಾಲ ಬಂತು

  • IndiaGlitz, [Saturday,May 24 2014]

ಕಾಲ ಭೈರವ ಕನ್ನಡ ಸಿನೆಮಾ ನೆನೆಗುದಿಗೆ ಬಿತ್ತು ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿರುವಾಗಲೇ ಅದರ ಬಿಡುಗಡೆ ಎದುರು ನೋಡುತ್ತಿದ್ದಾರೆ ನಿರ್ಮಾಪಕರು.

ಲೂಸ್ ಮಾಧ ಯೋಗೀಶ್ ಹಾಗೂ ಚೆಲುವಿ ಅಖಿಲ ಅಭಿನಯದ ‘ಕಾಲ ಭೈರವ’ ಕಂಗಾಲಾಗಲು ಕಾರಣ ನಾಯಕ ಯೋಗೀಶ್ ಅವರ ಒಂದರ ಹಿಂದಿ ಒಂದಿನ ಸಿನೆಮಗಳು ನೆಲಕಚ್ಚಿದ್ದು ಒಂದು ಕಾರಣವೇ.

ಶ್ರೀ. ಜೈ ಭುವನೇಶ್ವರಿ ಆರ್ಟ್ಸ್ ಲಾಂಛನದಲ್ಲಿ ತಮ್ಮಯ್ಯ-ಕುಮರೇಶ್ಬಾಬು ನಿರ್ಮಾಣದಲ್ಲಿ ಶಿವಪ್ರಭು ನಿರ್ದೇಶಿಸುತ್ತಿರುವ ಕಾಲಭೈರವ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಛಾಯಾಗ್ರಹಣ-ನಾಗೇಶ್ವರ ರಾವ್, ಸಂಗೀತ - ಜೆಸ್ಸಿಗಿಫ್ಟ್, ಸಹನಿರ್ದೇಶನ-ಕಾಂತರಾಜಬೇವ, ಸಂಕಲನ - ಅಕ್ಷಯ್ ಪಿ ರಾವ್, ಸಾಹಸ - ರವಿವರ್ಮ, ನಿರ್ವಹಣೆ - ಗಂಡಸಿ ರಾಜು ಅವರದು.

ತಾರಾಗಣದಲ್ಲಿ - ಯೋಗೀಶ್, ಅಖಿಲಾ ಕಿಶೋರ್, ಮೇಸ್ತ್ರಿ ಬಾಲು, ರಂಗಾಯಣ ರಘು, ಶರತ್ ಲೋಹಿತಾಶ್ವ, ಸುಚೀಂದ್ರ ಪ್ರಸಾದ್, ನೀನಾಸಂ ಅಶ್ವತ್, ಮಾಳವಿಕ, ಸಾಧು ಕೋಕಿಲ, ಮುಂತಾದವರಿದ್ದಾರೆ.