ಕೋಬ್ರ ಸಾಹಸ

  • IndiaGlitz, [Friday,January 31 2014]

ನಾಯಕನ ಸ್ನೇಹಿತರನ್ನು ವಿಲನ್ ಕಡೆಯವರು ಅಪಹರಿಸಿರುತ್ತಾರೆ. ದುಡ್ಡು ಕೊಟ್ಟರೆ ಅವರನ್ನೆಲ್ಲ ಬಿಡುತ್ತೇನೆ ಎಂಬ ಮಾತು ವಿಲನ್ ಕಡೆಯಿಂದ ಕೇಳಿ ಬರುತ್ತದೆ. ಈ ವಿಷಯ ತಿಳಿದ ನಾಯಕ ವಿಲನ್ ಇರುವ ಕಡೆ ಬಂದು ಆತನೊಂದಿಗೆ ಹೋರಾಡಿ ತನ್ನ ಕಡೆಯವರನ್ನೆಲ್ಲ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ಈ ಸನ್ನಿವೇಶವನ್ನು ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ಅವರು ನಿರ್ಮಿಸುತ್ತಿರುವ ‘ಕೋಬ್ರ ಚಿತ್ರಕ್ಕಾಗಿ ಹೊಸಕೋಟೆ ಬಳಿಯ ಐಕಾನ್ ಕಾರ್ಖಾನೆಯಲ್ಲಿ ಚಿತ್ರಿಸಿಕೊಳ್ಳಲಾಯಿತು. ನಾಯಕ ವಿಜಯ್, ದುಬೈ ರಫ಼ೀಕ್, ಬಚ್ಚನ್, ನಸೀರ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಗಣೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.

ಎಚ್.ವಾಸು ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಸೋನಾ ಛಾಬ್ರಾ, ಮಾಹಿನ್, ರವಿಕಾಳೆ, ಶೋಭ್ರಾಜ್, ಸತ್ಯಜಿತ್, ಫ಼ಜರ್ಕಾನ್, ದುಬೈ ರಫ಼ೀಕ್, ಧರ್ಮ, ಬಚ್ಚನ್, ನಸೀರ್, ಮಾಲತಿ ಸರ್ ದೆಶಪಾಂಡೆ, ಅನಂತವೇಲು, ಮಾ:ರಾಹುಲ್, ಮಾ:ಪ್ರಫುಲ್, ಮಾ:ಜಯಂತ್, ಕು.ಇಂಪನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಾಹಿನ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ ಬರೆದಿದ್ದಾರೆ. ಧರ್ಮಾ ವಿಷ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ರವಿವರ್ಮ, ಕೆ.ಡಿ.ವೆಂಕಟೇಶ್, ಗಣೇಶ್(ಚೆನೈ) ಸಾಹಸ ನಿರ್ದೇಶನ ‘ಕೋಬ್ರ ಚಿತ್ರಕ್ಕಿದೆ.