ಖುಷಿಖುಷಿಯಾಗಿ ಬರಲು ಸಿದ್ದ

  • IndiaGlitz, [Thursday,October 09 2014]

ಯಾವುದೇ ಕೆಲಸ ಆದರೂ ಖುಷಿ ಖುಷಿಯಾಗಿ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಆಗಲೇ ಕೆಲಸಕ್ಕೆ ಒಂದು ಮರ್ಯಾದೆ ಹಾಗೂ ಫಲ ಅಪೇಕ್ಷಣೆ ಸಾಧ್ಯ.

ಖುಷಿ ಖುಷಿಯಾಗಿ ಸಿನೆಮಾ ಅಂತೂ ಬಹಳ ನಿಷ್ಠೆ ಇಂದ ರೀಮೇಕ್ ಮಾಡಿದ್ದು ಆಗಿದೆ. ಇದು ತೆಲುಗಿನ ಗುಂಡೆ ಘಲ್ಲಾಂತ ಆಯಿದಿ ಚಿತ್ರದ ಕನ್ನಡ ಅವತರಿಣಿಕೆ. ಹೆಚ್.ಪಿ.ಆರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಹರಿಪ್ರಸಾದ್ ರಾವ್,ನಾಗೇಶ್ವರ್ ರಾವ್ ಹಾಗೂ ವಿಜಯಕೃಷ್ಣ ಅವರು ನಿರ್ಮಿಸಿರುವ ಖುಷಿಖುಷಿಯಾಗಿ ಚಿತ್ರ ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ..

ಯೋಗಿ.ಜಿ.ರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿದ್ದಾರೆ. ಅಮೂಲ್ಯ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ನಂದಿನಿ ರೈ,ಸಾಧುಕೋಕಿಲ,ಸಿಲ್ಲಿಲಲ್ಲಿ ಆನಂದ್,ಅಚ್ಯುತಕುಮಾರ್,ಸಂಗೀತಾ ಮುಂತಾದವರಿದ್ದಾರೆ.

ಶ್ರೀಷ ಅವರ ಛಾಯಾಗ್ರಹಣರುವ ಈ ಚಿತ್ರಕ್ಕೆ ಅನೂಪ್ ರುವೆನ್ಸ ಸಂಗೀತ ನೀಡಿದ್ದಾರೆ. ಜೋ.ನಿ.ಹರ್ಷ ಸಂಕಲನ,ಹರ್ಷ ನೃತ್ಯ ನಿರ್ದೇಶನ ಹಾಗೂ ರವಿವರ್ಮರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶಿವು ಅವರ ಕಲಾ ನಿರ್ದೇಶನವಿದೆ.