ಗಾಂಧೀಜಿ ಕನಸು

  • IndiaGlitz, [Saturday,August 09 2014]

ಮಹಾತ್ಮ ಗಾಂಧೀಜಿ ಅವರ ಕನಸು ಆಧಾರಿತ ಕನ್ನಡ ಸಿನೆಮಾ ದೇಶದ ಸ್ವಾತಂತ್ರೋತ್ಸವ ದಿವಸದಂಡೆ ಬಿಡುಗಡೆ ಆಗುತ್ತಿದೆ. ಗ್ರಾಮ ನೈರ್ಮಲ್ಯ,ಗ್ರಾಮಿಣಬಿವೃದ್ದಿ ಹೀಗೆ ಅನೇಕ ಕನಸುಗಳನ್ನು ಹೊತ್ತ ಗಾಂಧೀಜಿ ಕನಸು 15 ರಂದು ರಾಜ್ಯಾದ್ಯಂತ ಬಿಡುಗಡೆ ಆತುತ್ತಿದೆ.

ಶ್ರೀ ಚೌಡೇಶ್ವರಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಚಿತ್ರಕ್ಕೆ ರಮೇಶ್ ಎಸ್ ಪರವಿನಾಯಕರ್ ಕಥೆ,ಚಿತ್ರಕಥೆ ಬರೆದು ನಿರ್ಮಾಣ ಜೊತೆ ನಿರ್ದೇಶನ ಸಹ ಮಾಡಿದ್ದಾರೆ. ಆರ್ ಗಿರಿ ಅವರ ಛಾಯಾಗ್ರಹಣ, ಗುರುರಾಜ್ ಹೊಸಕೋಟೆ ಅವರ ಸಂಗೀತ,ಮನು ಅವರ ಸಂಭಾಷಣೆ,ಸಿದ್ದು ನರಗುಂದ,ಗುರುರಾಜ ಹೊಸಕೋಟೆ ಅವರ ಸಾಹಿತ್ಯವಿದೆ. ಮದನ್ ಹಾಗೂ ಹರಿಣಿ ಅವರ ನೃತ್ಯ ನಿರ್ದೇಶನ,ಈಶ್ವರ್ ಅವರ ಸಂಕಲನ ಒದಗಿಸಿದ್ದಾರೆ.

ರಮೇಶ್,ರೂಪಿಕಾ,ಎಂ ಎನ್ ಲಕ್ಷ್ಮಿ ದೇವಿ,ಬಂಕ್ ಜನಾರ್ಧನ್,ಹೊನ್ನಾವಲ್ಲಿ ಕೃಷ್ಣ,ರೇಖ ದಾಸ್,ಎಂ ಎಸ್ ಉಮೇಶ್,ರಾಜ್ಯ ಸಚಿವರುಗಳಾದ ಎಸ್ ಆರ್ ಪಾಟಿಲ್,ಎಚ್ ಕೆ ಪಾಟೀಲ್,ಮಾಜಿ ಸಚಿವರು ಆರ್ ಎಸ್ ತಿಮ್ಮಪುರ್ ಹಾಗೂ ಎಸ್ ಬಿ ನಂಜಯ್ಯನ ಮಟ್ ತಾರಾಗಣದಲ್ಲಿ ಇದ್ದಾರೆ.