ನಾನು ಹೇಮಂತ್... ಮುಕ್ತಾಯ

  • IndiaGlitz, [Friday,May 16 2014]

ಸುಧಾಕರ್ ಬನ್ನಂಜೆ ಹಿಡಿದ ಕೆಲಸ ಸಡಿಸುವುದುದರಲ್ಲಿ ನಿಸ್ಸೀಮರು. ಕನ್ನಡ ಸಿನೆಮವೇ ಆಗಲಿ ತುಳು ಭಾಷೆ ಸಿನೆಮವೇ ಆಗಲಿ ಅವರು ನಿಷ್ಠೆ ಇಂದ ಕೆಲಸ ಮಾಡಿ ತೋರಿಸುತ್ತಾರೆ.

ಸ್ನೇಹಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ನಾನು ಹೇಮಂತ್ ಅವಳು ಸೇವಂತಿ ಚಿತ್ರಕ್ಕೆ ಈಗ ಪ್ರೀತಿ ಮಾಡೋ ಟೈಂ, ಬೇಗ ಹಾಡು ಲವ್ ಗೇಮು ಈ ಹಾಡಲ್ಲಿ ಅಗ್ನಿಸಾಕ್ಷಿ ಧಾರವಾಹಿಯ ವಿಜಯ್ ಹಾಗೂ ಚಿತ್ರದ ಬಹುಪಾಲು ಕಲಾವಿದರೊಂದಿಗೆ ೧೦೦ ಜನ ಸಹ ಕಲಾವಿದರು ಪಾಲ್ಗೊಂಡಿದ್ದ ಹಾಡಿನೊಂದಿಗೆ ಚಿತ್ರೀಕರಣ ಮುಕ್ತಾಯವಾಯಿತು. ಸುಧಾಕರ್ ಬನ್ನಂಜೆ ರಚಿಸಿದ ಈ ಗೀತೆ ಸದಾ ನೃತ್ಯ ನಿರ್ದೇಶನದಲ್ಲಿ ನಡೆಯಿತು.

ಸುಧಾಕರ್ ಬನ್ನಂಜೆ ಅವರು ತಮ್ಮ ಗೆಳೆಯರ ಜೊತೆಗೂಡಿ ನಿರ್ಮಿಸುತ್ತಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ನಾಗರಾಜ್ ಅದ್ವಾನಿ ಛಾಯಾಗ್ರಹಣ, ಮದನ್-ಮೋಹನ್ ಸಂಗೀತ, ಗಿರೀಶ್ ಕುಮಾರ್-ಸಂಕಲನ, ತಮ್ಮ ಲಕ್ಷ್ಮಣ್-ಕಲಾನಿರ್ದೇಶನ, ಅರಸು-ನಿರ್ಮಾಣ ನಿರ್ವಹಣೆ ಈ ಚಿತ್ರದಲ್ಲಿ ರಜನೀಶ್ ಮತ್ತು ವಿಜೇಶ್ ಶೆಟ್ಟಿ, ಲೇಖಾ ಚಂದ್ರ, ನವ್ಯಾ, ದಿವ್ಯಶ್ರೀ,ಮಂಜು ಮಲ್ನಾಡ್, ದುರ್ಗಾಪ್ರಸಾದ್, ಪ್ರಕಾಶ್ ಕುತ್ತೆತ್ತೂರು. ಯಶವಂತ್, ಕಾರ್ಕಳ ಶೇಖರ ಭಂಡಾರಿ, ರಾಘವೇಂದ್ರ, ಸಾಮಂತ್, ಭರತ್, ಸುರೇಶ್, ಶೇಖರ ಪಂಗಾಳ, ಮಾಸ್ಟರ್ ಪ್ರೇರಣ್, ರಮೇಶ್, ಶಿವಶಂಕರ ರೆಡ್ಡಿ, ರಾಧಿಕಾ, ಸೌಮ್ಯ, ಪೂರ್ವಿ, ಸಿಂಚನಾ, ಸುಪ್ರೀತ,ಮುಂತಾದವರಿದ್ದಾರೆ.