ಪಾರುಗೆ ಯು

  • IndiaGlitz, [Monday,May 26 2014]

ಇತ್ತೀಚಿಗೆ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡಿಕೊಂಡು ಕೆಲವು ಹಾಡುಗಳಿಗೆ ನಿರ್ದೇಶಕ ಕಿರಣ್ ಗೋವಿ ಅವರು ಶಬಾಷ್ ಮಾತುಗಳನ್ನು ಕೇಳುತ್ತಿರುವರು. ಅವರ ಹಿಂದಿನ ಎರಡು ಸಿನೆಮಗಳು – ಪಯಣ ಹಾಗೂ ಸಂಚಾರಿ ಸಹ ಹಾಡಿನಲ್ಲಿ ಹೆಚ್ಚು ಅಂಕಗಳನ್ನು ಬಿಡುಗಡೆಗೂ ಮುಂಚೆ ತಂದು ಕೊಟ್ಟಿತು.

ಈಗ ಸೆನ್ಸಾರ್ ‘ಪಾರು ವೈಫ್ ಆಫ್ ದೇವ್ದಾಸ್’ ಸಿನೆಮವನ್ನು ವೀಕ್ಷಿಸಿ ‘ಯು’ ಸೇರ್ಟಿಫಿಕೇಟ್ ದಯಪಾಲಿಸಿದೆ. ಯಾವುದೇ ಕಟ್ ನೀಡದೆ ಮೆಚ್ಚುಗೆ ಸಿಕ್ಕಿರುವುದು ನಿರ್ದೇಶಕ ಕಿರಣ್ ಗೋವಿ ಅವರಿಗೆ ಸಂತೋಷ ಇಮ್ಮಡಿ ಆಗಿದೆ.

ಕಿರಣ್ ಗೋವಿ ಅವರ ತೃತೀಯ ಚಿತ್ರ ನವಿರಾದ ಪ್ರೇಮ, ಕುತೂಹಲಗಳ ಸಂಗಮ ಕೃಷ್ಣ ದೇವೇ ಗೌಡ ಅವರು ಮುಕ್ತಾರ್ ಅವರ ಜೊತೆ ಹನುಮಂತಪ್ಪ ಕಾರ್ಯನಿರ್ವಾಹಕ ನಿರ್ಮಾಪಕರ.

ರಮೇಶ್ ರಾಜ್ ಅವರ ಛಾಯಾಗ್ರಹಣದಲ್ಲಿ, ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಫಳಣಿ ರಾಜ್ ಅವರ ಸಾಹಸದಲ್ಲಿ ಉತ್ಸುಕರಾಗಿ ಶ್ರೀನಗರ ಕಿಟ್ಟಿ ಹಾಗೂ ಸೌಂದರ್ಯ ಅವರ ಮುಖ್ಯ ಪಾತ್ರದಲ್ಲಿ ತೊಡಗಿಸಿಕೊಂಡಿರುವರು ಇದೊಂದು ಪ್ರೀತಿಯ ನಶೆ ಇರುವ ಚಿತ್ರ ಎನ್ನುತ್ತಾರೆ. ನೇಹ ಪಾಟಿಲ್, ಲಯೇಂದ್ರ, ಮೋಹನ್ ಜುನೇಜ, ವಿ ಮನೋಹರ್ ತಾರಾಗಣದಲ್ಲಿ ಇದ್ದಾರೆ.