ಬೆತ್ತನಗೆರೆ ಕಾಂಬ್ಳಿ ಬಂದ್ರು ವಿಜಯ್

  • IndiaGlitz, [Monday,June 09 2014]

ಮೆಚ್ಚಿನ ಕ್ರಿಕೆಟ್ ಆಟಗಾರ ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಜೊತೆಯಾಟ ಆಡಿದ ವಿನೋದ್ ಕಾಂಬ್ಳಿ ಕನ್ನಡ ಸಿನೆಮಾ ‘ಬೆತ್ತೆನೆಗೆರೆ’ ಒಪ್ಪಿಕೊಂಡು ಏಳು ದಿವಸದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದೆ ಚಿತ್ರಕ್ಕೆ ಟಫ್ಫ್ ಕಾಪ್ ಆಗಿ ಧುನಿಯ ವಿಜಯ್ ಅವರು ಸೇರಿಕೊಳ್ಳಲಿದ್ದಾರೆ. ಅವರಿಗೆ ನಾಲ್ಕು ದಿವಸಗಳ ಅತಿಥಿ ಪಾತ್ರ ಎಂದು ನಿರ್ದೇಶಕ ಮೋಹನ್ ಗೌಡ ಅವರು ತಿಳಿಸಿದ್ದಾರೆ.

ವಿನೋದ್ ಕಾಂಬ್ಳಿ ಅವರು ‘ಪಾರಿವಾಳ’ ಹಚ್ಚೆ ತಲೆಯ ಮೇಲೆ ಹಾಕಿಸಿಕೊಂಡು ಮಿರಿಮಿರಿ ಮಿಂಚಿದ್ದಾರೆ. ಮೋಹನ್ ಬಿ ಕೆರೆ ಅವರ ಸ್ಟುಡಿಯೋ ದಲ್ಲಿ 15 ಲಕ್ಷದ ಪೋಲೀಸು ಸ್ಟೇಷನ್ ಸೆಟ್ ಅಲ್ಲಿ ಕಾಂಬ್ಳಿ ಹಾಗೂ ಇತರರು ಒಳಗೊಂಡ ಸನ್ನಿವೇಶಗಳನ್ನು ಮೋಹನ್ ಗೌಡ ಅವರು ಚಿತ್ರೀಕರಿಸಿ ಕೊಂಡಿರುವರು.

ಮೈಸೂರು, ಶ್ರೀರಂಗಪಟ್ಟಣ, ಕನಕಪುರ, ನೆಲಮಂಗಲ ಸುತ್ತಲೂ ಚಿತ್ರೀಕರಣ ಮಾಡಿರುವ ‘ಬೆತ್ತೆನೆಗೆರೆ’ ಸಿನೆಮಕ್ಕೆ ಒಂದು ಜಾತ್ರೆ ಹಾಡು ಹಾಗೂ ಎರಡು ಸಾಹಸ ಸನ್ನಿವೇಶಗಳ ಚಿತ್ರೀಕರಣ ಆಗಬೇಕಿದೆ.

ಮೋಹನ್ ನಿರ್ದೇಶಕರಾಗಿ ಬೆಡ್ರಪ್ಪ ಬೇಡಿ ಈ ರೌಡಿಗಳಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಕರೆ ಕೊಡುತ್ತಿದ್ದಾರೆ. ಇದು ಸತ್ಯ ಘಟನೆ ಆಧಾರಿತ ಚಿತ್ರ.ಮೋಹನ್ ಗೌಡ ಬಿ ಜಿ. ‘ಬೆತ್ತೆನೆಗೆರೆ’ ಸಿನಮಾ ಕಥೆ ಬರೆದು, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ.

‘ಬೆತ್ತನಗೆರೆ’ ...ಎ ರಾ ಸ್ಟೋರಿ! ಇಬ್ಬರು ಹೆಸರಾಂತ ನಿರ್ಮಾಪಕರುಗಳ ಮಕ್ಕಳು ಅಕ್ಷಯ್ ಹಾಗೂ ಸುಮಂತ್ ಸಹೋದರರಾಗಿ ಅಭಿನಯಿಸಿದ್ದಾ ರೆ. ನಯನ ಈ ಚಿತ್ರದ ನಾಯಕಿ. ಮುನಿರಾಜ್, ಶೋಬಾರಾಜ್, ಅವಿನಾಷ್, ಬುಲ್ಲೆಟ್ ಪ್ರಕಾಷ್, ವೀಣ ಹಾಗೂ ಇತರರು ಪೋಷಕ ಕಲಾವಿದರುಗಳು.

ಸವಿಕ ಎಂಟೆರ್ಪೃಸೆಸ್ ಅಡಿಯಲ್ಲಿ ಬಿ ಎನ್ ಸ್ವಾಮಿ ಅವರು ನಿರ್ಮಿಸುತ್ತಿರುವ ‘ಬೆತ್ತೆನೆಗೆರೆ’ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಮುಕುಂದ.

ಎಚ್ ಸಿ ವೇಣು ಛಾಯಾಗ್ರಹಣ, ರಾಜೇಶ್ ರಾಮನಾಥ್ ಅವರ ಸಂಗೀತ, ಲಿಂಗರಜು ಅವರ ಸಂಕಲನ, ಮಾಲೂರ್ ಶ್ರ&#