ಬೆಳ್ಳಿ ಮಾತು ಹಾಗೂ ಟ್ರೈಲರ್

  • IndiaGlitz, [Saturday,August 16 2014]

ಇಂದು ಶನಿವಾರ ಅರಮನೆಗಳ ನಗರ ಮೈಸೂರಿನಲ್ಲಿ ಬೆಳ್ಳಿ ಚಿತ್ರದ ಟ್ರೈಲರ್ ಬಿಡುಗಡೆ ಆಗುತ್ತಿದೆ. ಬೆಂಗಳೂರು ಬಿಟ್ಟು ಮೈಸೂರಿನಲ್ಲಿ ಟ್ರೈಲರ್ ಬಿಡುಗಡೆ ಆಗುತ್ತಿರುವುದು ಡಾಕ್ಟರ್ ಶಿವರಾಜಕುಮಾರ್ ಸಿನೆಮಾ ಇದೆ ಮೊದಲು.

ಸಧ್ಯಕ್ಕೆ ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸುತ್ತಿರುವ ಬೆಳ್ಳಿ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತಿನಜೋಡಣೆ ನಡೆಯುತ್ತಿದೆ.

ಮಹೇಶ್(ಮುಸ್ಸಂಜೆಮಾತು) ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ,ದೀಪು.ಎಸ್.ಕುಮಾರ್ ಸಂಕಲನ,ಗಣೇಶ್ ಸಾಹಸ ನಿರ್ದೇಶನ,ಎ.ಹರ್ಷ,ಆದಿಲ್ ಶೇಖ್,ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸೆಂಚುರಿ ಸ್ಟಾರ್ ಶಿವರಾಜಕುಮಾರ್,ಕೃತಿ ಖರಬಂದ,ವಿನೋದ್ ಪ್ರಭಾಕರ್,ದೀಪಕ್,ಒರಟ ಪ್ರಶಾಂತ್,ವೆಂಕಟೇಶ್,ಆದಿಲೋಕೇಶ್,ಪದ್ಮಾವಾಸಂತಿ,ಬಿ.ವಿ.ರಾಧಾ,ಶ್ರೀನಿವಾಸಮೂರ್ತಿ,ರಮೇಶ್ ಭಟ್,ನಾಗರಾಜ್,ಹರೀಶ್ ರೈ,ಲೋಕಿ,ನೀನಾಸಂ ಮಂಜು,ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅರವಿಂದ್ ರಾವ್ ಕಾರ್ಯಕಾರಿ ನಿರ್ಮಾಪಕರಾಗಿರುವ ಬೆಳ್ಳಿ ಚಿತ್ರಕ್ಕೆ ಕೆ.ಜೆ.ರಾಜಶೇಖರ್