close
Choose your channels

ಮಾಸಾಂತ್ಯಕ್ಕೆ ಸಡಗರ

Saturday, March 22, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಹೆಸರಲ್ಲೆ ಒಂದು ಆಪ್ಯಾಯಮಾನ್ಯತೆ. ಹೌದು. ಸಡಗರ ಶೀರ್ಷಿಕೆ ಅಷ್ಟೇ ಸಿನೆಮಾ ಸಹ ಇದ್ದರೆ ಇನ್ನೇನು ಬೇಕು. ಹೊಸ ವರ್ಷ ಉಗಾದಿ ಸಮಯಕ್ಕೆ ಬರುತ್ತಿದೆ ಈ ‘ಸಡಗರ’. ಹಬ್ಬದ ಸಡಗರ ಒಂದು ಕಡೆ, ಇನ್ನೊಂದು ಕಡೆ ‘ಸಡಗರ’ ಸಿನೆಮಾ ಬಿಡುಗಡೆ ಸಡಗರ.

ಸೌಭಾಗ್ಯ ಸಿನಿಮಾ ಲಾಂಛನದಲ್ಲಿ ಮಹೇಶ್ಗೌಡ ಅವರು ನಿರ್ಮಿಸಿರುವ ‘ಸಡಗರ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಮಾಸಾಂತ್ಯಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ರಾಜ್ಗೋಪಿಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿನೋದ್ಭಾರತಿ ಅವರ ಛಾಯಾಗ್ರಹಣವಿದೆ. ವಿ.ಶ್ರೀಧರ್ ಸಂಗೀತ ನಿರ್ದೇಶನ ಹಾಗೂ ಕಲೈ ಅವರ ನೃತ್ಯ ನಿರ್ದೇಶನವಿದೆ.

ಶಂಕರ್ ಆರ್ಯನ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಯಜ್ಞಾಶೆಟ್ಟಿ.

ಶರತ್ಲೋಹಿತಾಶ್ವ, ತಬಲನಾಣಿ, ಮಂಜುನಾಥ್, ಕುರಿ ಸುನೀಲ್, ಭಜರಂಗಿ ಲೋಕಿ, ಕೃಷ್ಣಅಡಿಗ, ಆಶಾರಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!