ಸಡಗರ ಸಂಭ್ರಮಿಸಲು ಸಿದ್ದ

  • IndiaGlitz, [Thursday,February 13 2014]

ಚಿತ್ರದ ಶೀರ್ಷಿಕೆಯೇ ಒಂದು ಆಪ್ಯಾಯಮಾನ. ಹಾಗಿದ್ದರೆ ಸಿನೆಮಾ. ಅದನ್ನು ತೆರೆಯ ಮೇಲೆ ನೋಡಬೇಕು. ಶ್ರೀ ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್.ಜಿ ಅವರು ನಿರ್ಮಿಸಿರುವ ‘ಸಡಗರ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಮಾಸಾಂತ್ಯಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗೋಪಿಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಶಂಕರ್ಆರ್ಯನ್ ಅಭಿನಯಿಸಿದ್ದಾರೆ. ಯಜ್ಞಾಶೆಟ್ಟಿ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಶರತ್ ಲೋಹಿತಾಶ್ವ, ತಬಲನಾಣಿ, ಮಂಜುನಾಥ ಹೆಗಡೆ, ಪದ್ಮಿನಿಪ್ರಕಾಶ್, ಆಶಾರಾಣಿ, ಕುಣಿಗಲ್ ಸುನಿಲ್, ಕೃಷ್ಣ ಅಡಿಗ ಮುಂತಾದವರಿದ್ದಾರೆ.

ಶ್ರೀಧರ್.ವಿ.ಸಂಭ್ರಮ್ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿನೋದ್ಭಾರತಿ ಅವರ ಛಾಯಾಗ್ರಹಣವಿದೆ. ಸನತ್ಸುರೇಶ್ ಸಂಕಲನ ಹಾಗೂ ಕಲೈ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸಂತೋಷ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.