ಸದ್ಯದಲ್ಲೇ ಬೆಳ್ಳಿ

  • IndiaGlitz, [Wednesday,September 17 2014]

ಬೆಳ್ಳಿ ರಾರಾಜಿಸಲು ಶುರು ಇಟ್ಟುಕೊಂಡಿದೆ. ಚಿತ್ರದ ಟ್ರೈಲರ್ ಈಗಾಗಲೇ ಅನೇಕ ಚಿತ್ರ ಮಂದಿರಗಳಲ್ಲಿ ಶಿಲ್ಲೆ ಚಪ್ಪಾಳೆ ಅನ್ನು ಗಿಟ್ಟಿಸಿಕೊಂಡಿದೆ. ಸಧ್ಯದಲ್ಲೇ ಧ್ವನಿ ಸುರುಳಿ ಬಿಡುಗಡೆ ಹಾಗೂ ಚಿತ್ರಮಂದಿರಗಳು ವ್ಯವಸ್ಥಿತ ರೀತಿಯಲ್ಲಿ ಸಿಕ್ಕ ನಂತರ ಬಿಡುಗಡೆ ಭಾಗ್ಯ ಸಹ ಡಾಕ್ಟರ್ ಶಿವರಾಜಕುಮಾರ್ ಅಭಿಮಾನಿಗಳಿಗೆ ಔತಣ ಸಿಗಲಿದೆ.

ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸಿರುವ ಬೆಳ್ಳಿ ಚಿತ್ರ ಅಕ್ಟೋಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗುವ ಸಾಧ್ಯತೆ ಇದೆ.

ಮಹೇಶ್(ಮುಸ್ಸಂಜೆಮಾತು) ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ,ದೀಪು.ಎಸ್.ಕುಮಾರ್ ಸಂಕಲನ,ಗಣೇಶ್ ಸಾಹಸ ನಿರ್ದೇಶನ,ಎ.ಹರ್ಷ,ಆದಿಲ್ ಶೇಖ್,ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸೆಂಚುರಿ ಸ್ಟಾರ್ ಶಿವರಾಜಕುಮಾರ್,ಕೃತಿ ಖರಬಂದ,ವಿನೋದ್ ಪ್ರಭಾಕರ್,ದೀಪಕ್,ಒರಟ ಪ್ರಶಾಂತ್,ವೆಂಕಟೇಶ್,ಆದಿಲೋಕೇಶ್,ಪದ್ಮಾವಾಸಂತಿ,ಬಿ.ವಿ.ರಾಧಾ,ಶ್ರೀನಿವಾಸಮೂರ್ತಿ,ರಮೇಶ್ ಭಟ್,ನಾಗರಾಜ್,ಹರೀಶ್ ರೈ,ಲೋಕಿ,ನೀನಾಸಂ ಮಂಜು,ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಬೆಳ್ಳಿ ಚಿತ್ರಕ್ಕೆ ಕೆ.ಜೆ.ರಾಜಶೇಖರ್ ಸಹ ನಿರ್ಮಾಪಕರಾಗಿದ್ದಾರೆ.