ಸಿಂಹಾದ್ರಿ 175 ಸ್ಕ್ರೀನ್ ಬಿಡುಗಡೆ

  • IndiaGlitz, [Wednesday,October 01 2014]

ಇದು ಬಹುಶಃ ದುನಿಯಾ ವಿಜಯ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಹೆಚ್ಚು ಸಿನೆಮಾ ಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಸಿನೆಮಾ.ಸಿಂಹಾದ್ರಿ ನಾಳೆ ಗುರುವಾರ 175 ಚಿತ್ರಮಂದಿರಗಳನ್ನು ಪಡೆದು ಕೊಂಡಿದೆ.ಮಂಗಳ ವಾರ ಪತ್ರಿಕಾಗೋಷ್ಠಿ ಬಿಡುಗಡೆ ಮುನ್ನ ಉದ್ದೇಶಿಸಿ ಮಾತನಾಡುತ್ತಾ ಸಿಂಹಾದ್ರಿ ಅಂದರೆ ಸಾಹಸ,ರಭಸ,ಶಕ್ತಿ ಸಮ್ಮಿಲನ ಎಂದು ಬಣ್ಣಿಸುತ್ತಾರೆ ನಿರ್ದೇಶಕ ಶಿವಮಣಿ. ಸೌಂದರ್ಯ ಜಯಮಾಲ ಈ ಚಿತ್ರದಲ್ಲಿ ಒಂದು ಕಳ್ಳಿ ಪಾತ್ರದಲ್ಲಿ ಇದ್ದಾರೆ. ಪ್ರೀತಿಯ ನಂಟು ವಿಜಯ್ ಜೊತೆಗಿದೆ. ಕನ್ನಡಕ್ಕೆ ಹೊಸ ತಂಗಿ ಐಶ್ವರ್ಯ ಆಗಮನ ಸಿನೆಮದಿಂದ ಆಗಿದೆ.

ಈ ಚಿತ್ರಕ್ಕೆ ನಿರ್ಮಾಪಕ ಆರ್ ಎಸ್ ಗೌಡ ಅವರೇ ಕಥೆ ಬರೆದಿದ್ದಾರೆ. ದುನಿಯಾ ವಿಜಯ್ ಇಂತಹ ಕೌಟುಂಬಿಕ ಸಿನೆಮಗಳಲ್ಲಿ ಅಭಿನಯಿಸಲು ಸದಾ ಸಿದ್ದ ಅಂತಾರೆ.

ದಸರಾ ಹಬ್ಬದ ಸಡಗರದಲ್ಲಿ ಇಡೀ ರಾಜ್ಯವೆ ಸಂಭ್ರಮ ಪಡುತ್ತಿದ್ದರೆ ಅದರ ಜೊತೆಗೆ ಸಿಂಹಾದ್ರಿ ಕನ್ನಡ ಸಿನೆಮಾ ಸಹ ಮನರಂಜನೆ ಜೊತೆಗೆ ಕುಟುಂಬಕ್ಕೆ ಒಂದು ಸೊಗಸಾದ ನಿರೂಪಣೆಯ ಚಿತ್ರ ಬಿಡುಗಡೆ ಆಗುತ್ತಿದೆ.

ಹಾಡುಗಳಿಂದ,ಚಿತ್ರದ ಟ್ರೈಲರ್ ಇಂದ ಸದ್ದು ಮಾಡಿರುವ ಯಶಸ್ವಿ ಚಿತ್ರಗಳ ನಿರ್ಮಾಪಕ ಆರ್ ಎಸ್ ಗೌಡ ಅವರ ಮೆಗಾ ಹಿಟ್ ಬ್ಯಾನ್ನರ್ ಅಡಿಯಲ್ಲಿ ತಯಾರಾಗಿರುವ ಚಿತ್ರ ಸಾಹಸ ಹಾಗೂ ಸೆಂಟಿಮೆಂಟ್ ಸಿನೆಮಾಗಳ ನಿರ್ದೇಶಕ ಶಿವಮಣಿ ಅವರ ನೈಪುಣ್ಯ ಚಿತ್ರಕ್ಕೆ ಇದೆ.

ಸಿಂಹಾದ್ರಿ ಸಾಹಸ ಚಿತ್ರಗಳ ಸರದಾರ ವಿಜಯ್,ಸೌಂದರ್ಯ ಹಾಗೂ ಐಶ್ವರ್ಯ ಅಭಿನಯದ ಚಿತ್ರ ಅಷ್ಟೇ ಅಲ್ಲದೆ ಸಿನೆಮಾದಲ್ಲಿ ದೊಡ್ಡ ತಾರಗಣವೇ ಇದೆ. ಅಣ್ಣ ತಂಗಿಯ ಸಂಭದದ ಜೊತೆಗೆ ಹಲವು ತಿರುವುಗಳನ್ನು ಇಟ್ಟುಕೊಂಡಿದೆ.ಸಾಹಸಮಯ ಸನ್ನಿವೇಶಗಳು,ಪ್ರೀತಿ,ಕಾಮಿಡಿ,ಮನಮಿಡಿಯುವ ದೃಶ್ಯಗಳು ಈ ಸಿಂಹಾದ್ರಿ ಚಿತ್ರದ ಜೀವಾಳ ಎನ್ನುತ್ತಾರೆ ಶಿವಮಣಿ ಅವರು.

ಅರ್ಜುನ್ ಜನ್ಯ ಅವರ ಸಂಗೀತ,ಆರ್ ಗಿರಿ ಅವರ ಛಾ