close
Choose your channels

ಬಾಂಬೆ ಮಿಠಾಯಿ ರೋಹಿತ್ ಆಕರ್ಷಣೆ

Wednesday, July 30, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಬಾಂಬೆ ಮಿಠಾಯಿ ಕಳೆದ ವಾರ ಗುರು ಕಿರಣ್ ಅವರ ಹಾಡಿನೊಂದಿಗೆ ಸುದ್ದಿ ಮಾಡಿತ್ತು. ಈ ವಾರ ಇದೆ ಚಿತ್ರದಲ್ಲಿ ರಾಕ್ ಸ್ಟಾರ್ ಆರ್ ಜೆ ರೋಹಿತ್ ಅವರ ಚಿತ್ರೀಕರಣದ ಸುದ್ದಿ ಬಂದಿದೆ.

ಸಧ್ಯಕ್ಕೆ ಬಿಗ್ ಬಾಸ್ 2 ಆಕರ್ಷಣೆ ಆಗಿರುವ ಆರ್ ಜೆ ರೋಹಿತ್ ಅಭಿನಯದ ವಿಷಯವನ್ನು ಚಿತ್ರ ತಂಡ ಗುಪ್ತವಾಗಿ ಇಟ್ಟುಕೊಂಡಿತ್ತು. ರೋಹಿತ್ ಅವರು ಬಾಂಬೆ ಮಿಠಾಯಿ ಅಲ್ಲಿ ಮೂರು ದಿವಸಗಳ ಕಾಲ ಪೊಲೀಸ್ ಅಧಿಕಾರಿ ಆಗಿ ಕೆಲಸ ಮಾಡಿ ಆನಂತರ ಬಿಗ್ ಬಾಸ್ 2 ಕಡೆ ತೊಡಗಿಸಿಕೊಂಡರು ಎಂದು ನಿರ್ದೇಶಕ ಚಂದ್ರಮೋಹನ್ ಅವರು ತಿಳಿಸಿದ್ದಾರೆ. ಚಿತ್ರ ತಂಡ ಬಿಗ್ ಬಾಸ್ 2 ಸ್ಪರ್ಧಿ ರೋಹಿತ್ ಅವರು ಜಯಶಾಲಿ ಆಗಿ ಬರಲಿ ಎಂದು ಆಶಿಸುತ್ತದೆ.

ಬಾಂಬೆ ಮಿಠಾಯಿ ಸಿನೆಮಾದಲ್ಲಿ ಮೂವರು ಸಂಗೀತ ನಿರ್ದೇಶಕರ ಸಂಗಮ ಕೂಡ ಆಗಿದೆ ಸಿನೆಮಾದ ಸಂಗೀತ ನಿರ್ದೇಶಕರು ವೀರ ಸಮರ್ಥ,ಸಿನೆಮಕ್ಕೆ ಹಾಡು ಹೇಳಿರುವ ಸಂಗೀತ ನಿರ್ದೇಶಕರು ಗುರುಕಿರಣ್ ಹಾಗೂ ಹಾಡನ್ನು ಬರೆದಿರುವವರು ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಹ ಸಂಗೀತ ನಿರ್ದೇಶಕರು.

ಟಚ್ ವುಡ್ ಕ್ರಿಯೇಷನ್ ಅಡಿಯಲ್ಲಿ ಸೌದ ಶರಿಫ್ ಹಾಗೂ ಅಮೀರ್ ಶರಿಫ್ ನಿರ್ಮಾಣದ ಬಾಂಬೆ ಮಿಠಾಯಿ ಚಂದ್ರಮೋಹನ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮೈಸೂರು, ಮಡಿಕೇರಿ, ಕುಶಾಲನಗರ, ಗೋಲ್ಡನ್ ಟೆಂಪಲ್, ಚಿಕ್ಕಮಗಳೂರು,ಕುದುರೆಮುಖ,ಕಳಸ ದೇವಸ್ಥಾನ, ಬಿಡಾಡಿ,ಮುರುಡೇಶ್ವರ,ಕಾರವಾರ,ಹುಬ್ಬಳ್ಳಿ,ಗದಗ್,ರಾಣಿ ಬೆನ್ನೂರ್,ಚಿತ್ರದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆ.ಬಾಂಬೆಮಿಠಾಯಿ ಚಂಚಲ ಮನಸ್ಸಿನ ಯುವಕನ ಸುತ್ತ ಹೆಣೆಯಲಾದ ಚಿತ್ರ.

ನಿರಂಜನ್ ದೇಶ್ಪಾಂಡೆ,ದಿಶಾ ಪಾಂಡೆ ಜೊತೆಗೆ ಪೋಷಕ ವರ್ಗದಲ್ಲಿ ಆರ್ ಜೆ ರೋಹಿತ್,ವಿಕ್ರಮ್,ಚಿಕ್ಕಣ್ಣ,ಕಿಶೋರಿ ಬಲ್ಲಾಳ್,ಸುನಿಲ್,ಬುಲ್ಲೆಟ್ ಪ್ರಕಾಷ್,ಮೈಕಲ್ ಮಧು,ಮೂಗು ಸುರೇಶ್,ನಲ್ಲೂರ್ ನಾರಾಯಣ್,ಬೇಬೀ ಬಿಂದುಶ್ರೀ ಇದ್ದಾರೆ.

Follow us on Google News and stay updated with the latest!