close
Choose your channels

ಮಾತಿಗೆ ಖುಷಿಖುಷಿಯಾಗಿ

Friday, June 13, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಯಾವುದೇ ಮಾಧ್ಯಮದ ಮೀಟ್ ಇಲ್ಲದೆ ಗಣೇಶ್ ಹಾಗೂ ಅಮೂಲ್ಯ ನಟನೆಯ ಚಿತ್ರ ‘ಖುಷಿ ಖುಷಿಯಾಗಿ’ ಮಾತಿನ ಮನೆ ತಲುಪಿದೆ.‘ಚೆಲುವಿನ ಚಿತ್ತಾರ’ ದಲ್ಲಿ ತೇಲಿದವರು,‘ಶ್ರಾವಣಿ ಸುಬ್ರಮಣಿ’ ಅಲ್ಲಿ ನಕ್ಕು ನಳಿಸಿದ ಈ ಜೋಡಿ ಈಗ ‘ಖುಷಿ ಖುಷಿಯಾಗಿ’ ಚಿತ್ರದಿಂದ ಖುಷಿ ನೀಡಲಿದೆ. ಇದು ತೆಲುಗು ಭಾಷೆಯಲ್ಲಿ 2013 ರಲ್ಲಿ ಬಂದಂತಹ ‘ಗುಂಡೇ ಜಾರಿ ಗಲ್ಲಂತಾಯಿದೆ’ ಚಿತ್ರದ ರೀಮೇಕ್.

ಹೆಚ್.ಪಿ.ಆರ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಹರಿಪ್ರಸಾದ್ರಾವ್, ನಾಗೇಶ್ವರ್ರಾವ್ ಹಾಗೂ ವಿಜಯಕೃಷ್ಣ ಅವರು ನಿರ್ಮಿಸಿರುವ ‘ಜಂಬೂ ಸವಾರಿ’ ತೆಲುಗಿನ ‘ಸ್ವಾಮಿ ರಾ ರಾ’ ನಿರ್ಮಾಪಕರು ಈ ರೀಮೇಕ್ ಸಹ ಕನ್ನಡಕ್ಕೆ ತರುತ್ತಿದ್ದಾರೆ. ‘ಖುಷಿಖುಷಿಯಾಗಿ ‘ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

ಯೋಗಿ.ಜಿ.ರಾಜ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಗೋಲ್ಡನ್ಸ್ಟಾರ್ ಗಣೇಶ್ ಅಭಿನಯಿಸುತ್ತಿದ್ದಾರೆ. ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ನಂದಿನಿ ರೈ, ಸಾಧುಕೋಕಿಲ, ಸಿಲ್ಲಿಲಲ್ಲಿ ಆನಂದ್, ಅಚ್ಯುತಕುಮಾರ್, ಸಂಗೀತಾ ಮುಂತಾದವರಿದ್ದಾರೆ.

ಶ್ರೀಷ ಅವರ ಛಾಯಾಗ್ರಹಣರುವ ಈ ಚಿತ್ರಕ್ಕೆ ಅನೂಪ್ ರುವೆನ್ಸ ಸಂಗೀತ ನೀಡುತ್ತಿದ್ದಾರೆ. ಜೋ.ನಿ.ಹರ್ಷ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ರವಿವರ್ಮರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶಿವು ಅವರ ಕಲಾ ನಿರ್ದೇಶನವಿದೆ.

Follow us on Google News and stay updated with the latest!